ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮದಿಂದ ದುಡಿಯಬೇಕು. ಇಲ್ಲದಿದ್ದರೆ ನಮ್ಮ ಪರಿಶ್ರಮವೆಲ್ಲ ಬೇರೆಯವರ ಕನಸು ನನಸಾಗಿಸಲು ದುಡಿಯಬೇಕಾಗುತ್ತದೆ.
+++++++++++++++++++++++++++++
ಮನುಷ್ಯನಿಗೆ ಅತ್ಯುತ್ತಮ ಔಷಧಗಳೆಂದರೆ ಪ್ರೀತಿ ಮತ್ತು ಕಾಳಜಿ. ಇವೆರಡರಿಂದ ಗುಣಮುಖರಾಗದಿದ್ದರೆ, ಈ ಔಷಧಗಳ ಪ್ರಮಾಣ(ಡೋಸ್)ವನ್ನು ಜಾಸ್ತಿ ಮಾಡಿದರಾಯಿತು.
+++++++++++++++++++++++++++++
ಎಲ್ಲ ಕಲಾವಿದರೂ ತಾವು ರಚಿಸಿದ ಚಿತ್ರದಲ್ಲಿ ತಮ್ಮ ಹೆಸರನ್ನು ಬರೆಯಲು ಮರೆಯುವುದಿಲ್ಲ. ಆದರೆ ತಾಯಿ ಇದ್ದಾಳಲ್ಲ, ತಾನು ಹೆತ್ತ ಮಗುವಿಗೆ ತನ್ನ ಗಂಡನ ಹೆಸರನ್ನು ನೀಡುತ್ತಾಳೆ. ನಾವು ಮಾಡುವ ಕಾರ್ಯಗಳ ಪ್ರತಿಫಲವನ್ನು ಬೇರೆಯವರಿಗೆ ನೀಡುವುದರಲ್ಲೂ ಆನಂದವಿದೆ.
+++++++++++++++++++++++++++++
ನಂಬಿಕೆ ಬಹಳ ಪುಟ್ಚ ಪದವಿರಬಹುದು. ಆದರೆ ಅದಕ್ಕೆ ಅಗಾಧ ಶಕ್ತಿ, ಸಾಮರ್ಥ್ಯವಿದೆ. ಬಹಳ ಜನರ ಸಮಸ್ಯೆ ಏನೆಂದರೆ, ಅವರೆಲ್ಲರಿಗೆ ತಮ್ಮ ನಂಬಿಕೆ ಮೇಲೆ ಸಂದೇಹ ಹಾಗೂ ಆ ಸಂದೇಹದ ಮೇಲೆ ನಂಬಿಕೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.
+++++++++++++++++++++++++++++
ದೊಡ್ಡ ದೊಡ್ಡ ಸಂಗತಿಗಳ ಬಗ್ಗೆ ಮಾತಾಡುವುದು ಪ್ರಬುದ್ಧತೆ ಅಲ್ಲ. ಸಣ್ಣಪುಟ್ಟ ಸಂಗತಿಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಬುದ್ಧತೆ. ಜೀವನಕ್ಕೆ ಬದ್ಧರಾಗಿರುವುದು ಪ್ರಬುದ್ಧತೆ ಲಕ್ಷಣ.
+++++++++++++++++++++++++++++
ಪ್ರತಿದಿನ ಏಳುವಾಗ ಈ ದಿನವು ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಿಕ್ಕ ಸದಾವಕಾಶ ಎಂದು ಭಾವಿಸಿ. ನಾವು ಆ ದಿನವನ್ನು ನೋಡುವ ರೀತಿಯೇ ಬದಲಾಗುತ್ತದೆ. ಹಾಗೆ ನಮ್ಮ ಜೀವನ ಸಹ.
+++++++++++++++++++++++++++++
ಮುಖ ಅಥವಾ ಮೈಮೇಲಿನ ಕಲೆಗಳ ಬಗ್ಗೆ ಹೆಚ್ಚು ಚಿಂತಿಸಬೇಡಿ, ಅವುಗಳನ್ನು ಹಚ್ಚೆಗಳು ಎಂದು ಭಾವಿಸಿ. ನೀವು ಅವುಗಳನ್ನು ನೋಡುವ ದೃಷ್ಟಿಯೇ ಬದಲಾದೀತು.
+++++++++++++++++++++++++++++
ತಪ್ಪು ಮಾಡಿದರೆ ನೀರು ನೆಲದಲ್ಲಿ ಚೆಲ್ಲಿಹೋದಂತೆ, ತಪ್ಪು ತಿದ್ದಲಾಗುವುದಿಲ್ಲ. ಆದರೆ ಮುಂದೆ ಅಂತಹ ತಪ್ಪುಮಾಡದಂತಾ, ಕಲಿಕೆಯ ಶಕ್ತಿ ಮತ್ತು ಸಾಮರ್ಥ್ಯ ನಮಗಿದೆ. ನಾವು ಅದನ್ನು ಉದ್ದೀಪಿಸಿಕೊಳ್ಳಬೇಕು.
+++++++++++++++++++++++++++++
ಎಲ್ಲ ಎಲ್ಲವನರಿದು ಫಲವೇನು ಮತ್ತೆ ಎಲ್ಲ ಎಲ್ಲವನರಿದು ಫಲವೇನು? ತನ್ನ ತಾನರಿಯದನ್ನಕ್ಕ? ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟೆ? ನಿಮ್ಮರಿವು ತಲೆದೋರಿದ ಕಾರಣ ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ.
+++++++++++++++++++++++++++++
ಯಾವುದಾದರೂ ಕೆಲಸವನ್ನು ಹೇಗೆ ಮುಗಿಸಬೇಕೆಂಬುದನ್ನು ಯಶಸ್ವಿ ವ್ಯಕ್ತಿಯನ್ನು ಕೇಳಬೇಕು. ಆ ಕೆಲಸವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಅನುಭವಿ ವ್ಯಕ್ತಿಯನ್ನು ಕೇಳಬೇಕು. ನಿಮ್ಮಲ್ಲಿ ಅದಮ್ಯ ಉತ್ಸಾಹವಿದ್ದರೆ ಯಾರನ್ನೂ ಕೇಳಬೇಕಾಗಿಲ್ಲ.
+++++++++++++++++++++++++++++
+++++++++++++++++++++++++++++
ನಗುವಿನ ಹಿಂದಿನ ನೋವನ್ನು ಮೌನದ ಹಿಂದಿನ ಮಾತನ್ನು ಸಿಟ್ಟಿನ ಹಿಂದಿನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳ ಬಲ್ಲವರೇ ನಿಜವಾದ ಗೆಳೆಯರು...!
+++++++++++++++++++++++++++++
+++++++++++++++++++++++++++++
ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ. ನೀವು ಕಿಸೆಯಲ್ಲಿ ಎಷ್ಟೇ ತುಂಬಿಕೊಂಡರೂ
ಅದು ಕೆಲವೇ ದಿನಗಳಿಗೆ ಸಾಕಾಗಬಹುದು. ಅದೇ ಹೃದಯದಲ್ಲಿ ತುಂಬಿಕೊಂಡರೆ ಜೀವನಪರ್ಯಂತ
ಸಾಕಾಗುತ್ತದೆ. ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ.
+++++++++++++++++++++++++++++
ಒಂದೋ ಸರಿಯಾಗಿ ತಿಳಿಯಲು ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಒಂದೋ ಸರಿಯಾಗಿ ತಿಳಿಯಲು
ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಸಿದ್ಧ ಉತ್ತರ ನೀಡಲು ಕೇಳಿಸಿಕೊಳ್ಳುವುದರಿಂದ ನಮ್ಮ
ಸಮಸ್ಯೆಗಳು ಆರಂಭವಾಗುತ್ತವೆ. ಬೇರೆಯವರು ಹೇಳುವುದನ್ನು ಕೇಳುವ ಸಹನೆ, ವ್ಯವಧಾನ
ಇರಬೇಕು.
+++++++++++++++++++++++++++++
ನೀವು ಸದಾ ನಗುತ್ತಿದ್ದರೆ ಅದು ನಿಮ್ಮ ಮನಸ್ಸಿನ ಭಾವನೆಯನ್ನು ತೋರಿಸುತ್ತದೆ. ಅದೇ ನೀವು
ಬೇರೆಯವರ ನಗುವಿಗೆ ಕಾರಣರಾದರೆ, ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವು ನಗಿ,
ಬೇರೆಯವರ ನಗುವಿಗೂ ಕಾರಣರಾಗಿ.
+++++++++++++++++++++++++++++
ನಾವು ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಸಮ್ಮತಿಸುವವರಿಂದ ನಮಗೆ ಸಮಧಾನ ಸಿಗಬಹುದು. ಆದರೆ
ಅಂಥವರಿಂದ ನಮ್ಮ ಬೆಳವಣಿಗೆ ಸಾಧ್ಯವಿಲ್ಲ. ನಿಮ್ಮನ್ನು ಟೀಕಿಸುವವರು, ವಿರೋಧಿಸುವವರು
ನಿಮ್ಮ ಬೆಳವಣಿಗೆಗೆ ಕಾರಣರು ಎಂಬುದನ್ನು ಮರೆಯಬಾರದು.
+++++++++++++++++++++++++++++
ಸಹನೆ ಹಾಗೂ ಮೌನ ಅತ್ಯಂತ ಶಕ್ತಿಶಾಲಿ ಸಾಧನಗಳು. ಸಹನೆ ಮಾನಸಿಕವಾಗಿ, ಮೌನ
ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತವೆ. ಸಹನೆ ಅಂದ್ರೆ ಮೌನವಾಗಿರುವುದಲ್ಲ. ಮೌನ ಅಂದ್ರೆ
ಎಲ್ಲವನೂ ಸಹಿಸಿಕೊಳ್ಳುವುದಲ್ಲ.
+++++++++++++++++++++++++++++
ಗೆಲುವು ನಿಮ್ಮನ್ನು ಇಡೀ ಜಗತ್ತಿಗೆ ಪರಿಚಯಿಸುತ್ತದೆ. ಅದೇ ಸೋಲಿದೆಯಲ್ಲ, ಅದು ನಿಮಗೆ
ಜಗತ್ತನ್ನು ಪರಿಚಯಿಸುತ್ತದೆ. ಸೋಲು ಕಲಿಸುವ ಪಾಠವನ್ನು ಗೆಲುವು ಹೇಳಿಕೊಡುವುದಿಲ್ಲ.
ನಿಮ್ಮ ಸೋಲು ನಿಮಗೆ ಗೆಲುವಾಗಿ ಪರಿಣಮಿಸಬೇಕು.
+++++++++++++++++++++++++++++
ಬೇರೆಯವರು ನಿಮಗಿಂತ ಒಳ್ಳೆಯವರಾಗಿದ್ದಾರೆ ಎಂದು ಚಿಂತೆ ಮಾಡಬೇಡಿ. ಪ್ರತಿದಿನ ನಿಮ್ಮ
ದಾಖಲೆಯನ್ನು ನೀವೇ ಮುರಿಯಬೇಕಾಗುತ್ತದೆ. ಅಷ್ಟಕ್ಕೂ ನಿಮ್ಮ ಜತೆ ಹೋರಾಡುವವರು ನೀವೇ.
+++++++++++++++++++++++++++++
ಯಾರೂ ಸಹ ಪರಿಪೂರ್ಣ ಅಲ್ಲ ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ. ಯಾರು ಬೇಕಾದರೂ
ಬದಲಾಗುತ್ತಾರೆ ಎಂಬುದು ವರ್ತಮಾನದಿಂದ ತಿಳಿಯುತ್ತದೆ. ಪ್ರತಿದಿನವೂ ಪಾಠ ಕಲಿಯಬೇಕು.
ಕಲಿಕೆಗೆ ಕೊನೆ ಇಲ್ಲ.
+++++++++++++++++++++++++++++
ನನಗೆ ಕಷ್ಟವನ್ನು ಕೊಡಲೇಬೇಡ ಎಂದು ದೇವರನ್ನು ಪ್ರಾರ್ಥಿಸುವ ಬದಲು, ಎಂಥ ಕಷ್ಟ ಬಂದರೂ
ಧೈರ್ಯದಿಂದ ಎದುರಿಸಿ ಜಯಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಿ. ಕಷ್ಟ ಎದುರಿಸಿದ
ಅನುಭವ, ಜಯಿಸಿದ ಸಂತಸ ನಿಮ್ಮದಾಗುತ್ತದೆ. ಅದನ್ಯಾಕೆ ಕಳೆದುಕೊಳ್ಳುತ್ತೀರಿ?
+++++++++++++++++++++++++++++
ಯಾವುದಾದರೂ ಕೆಲಸವನ್ನು ಹೇಗೆ ಮುಗಿಸಬೇಕೆಂಬುದನ್ನು ಯಶಸ್ವಿ ವ್ಯಕ್ತಿಯನ್ನು ಕೇಳಬೇಕು. ಆ
ಕೆಲಸವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಅನುಭವಿ ವ್ಯಕ್ತಿಯನ್ನು ಕೇಳಬೇಕು.
ನಿಮ್ಮಲ್ಲಿ ಅದಮ್ಯ ಉತ್ಸಾಹವಿದ್ದರೆ ಯಾರನ್ನೂ ಕೇಳಬೇಕಾಗಿಲ್ಲ.
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++
+++++++++++++++++++++++++++++