WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

ಪರಿಚಯ


ಕನ್ನಡ ಕುಲ ಕೋಟಿಗೆ ನನ್ನ ನಮಸ್ಕಾರಗಳು

ನಾನು ಚಂದ್ರು .... ಮಲ್ಟಿಮೀಡಿಯ ಚಂದ್ರುಜನನ ಏಪ್ರಿಲ್ 14 1982 ತಾರೀಖು. ಹುಟ್ಟೂರು ಸಿಂಗಸಂದ್ರ ಗ್ರಾಮ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ, ತಾಯಿ ಕಮಲಮ್ಮ ಮತ್ತು ತಂದೆ ಕೃಷ್ಣಪ್ಪ, ಒಬ್ಬ ಅಣ್ಣ, ಒಬ್ಬಳೇ ಅಕ್ಕ ಹಾಗು ನಾನು
ವಿದ್ಯಾಬ್ಯಾಸ

ಪ್ರೈಮರಿ ಸ್ಕೂಲ್, ಸಿಂಗಸಂದ್ರ ಗ್ರಾಮದ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಬ್ಯಾಸ ಭಾರತಿ ಪ್ರೌಡಶಾಲೆ ಆನೇಕಲ್ಲಿನಲ್ಲಿ. ಪತ್ರಿಕೊದ್ಯಮದಲ್ಲಿ ಅನುಭವ. ಓದಿದ್ದು ಅಲ್ಪ.......

ಪ್ರಾಣ ಸ್ನೇಹಿತ್ರು....
ನನ್ನ ಪ್ರಾಣ ಸ್ನೇಹಿತರು ಅಂದ್ರೆ ವಿಶ್ವ, ಚೇತನ್, ಬಾಸ್ಕರ, ಸುನೀಲ ಇಷ್ಟು ಜನ. ಯಾಕೆಂದ್ರೆ ಯಾವಗ್ಲೂ ಅವತ್ತಿಂದ ಇವತ್ತಿನವರೆವಿಗೂ ನನ್ನೇಲ್ಲಾ ಕಷ್ಟ ಸುಖಗಳನ್ನ ನೋವು ನಲಿವುಗಳನ್ನು ಹಂಚಿಕೊಳ್ಲಬೇಕೆಂದ್ರೆ ತಕ್ಷಣ ಸಿಕ್ಬಿಡ್ತಾರೆ.
ಕೆಲಸ
ಮಾಡಿದ್ದು 36 ಕೆಲಸ, ಅನುಭವ 20 ವರ್ಷದ ದುಡಿಮೆ,  ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಟ್ಟ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ನನಗೆ ಇಷ್ಟವಾದವುಗಳು

ನನ್ನ ತಂದೆ ತಾಯಿ, ನನ್ನಕ್ಕ ಶಕುಂತಲ, ನನ್ನ ಅಕ್ಕನ ಮಕ್ಕಳು ಸಂಧ್ಯಾ ಮತ್ತು ನವೀನ ಹಾಗೇ ನನ್ನಣ್ಣನ ಮಗ ಅಕ್ಷಯ, ನನ್ನ ಮನದಂಗಿತವನ್ನರೆತು ಅದರಂತೆಯೇ ನಡೆಯುವ ನನ್ನೆಂಡ್ತಿ ನಮಿತ, ಕನ್ನಡ ಭಾಷೆ, ಪುಸ್ತಕಗಳು, ಪಂಚಪ್ರಾಣವಾದ ಕೋಸಂಬರಿ, ನನ್ನೆಲ್ಲಾ ತಪ್ಪು ಸರಿಗಳನ್ನು ತಿದ್ದಿ ತೀಡಿ ಮುನ್ನೆಡೆಸುವ ನನ್ನ ಆತ್ಮೀಯರಾದ ತೋಪಯ್ಯ, ಮಂಜಣ್ಣ, ಬಿ.ಟಿ.ರವಿ, ಸೀನಣ್ಣ, ರಾಜಣ್ಣ, ಲೋಕನಾಥ, ಅರಣ್ಯ ಇಲಾಖೆಯ ಗಣೇಶ್ ಸರ್, ವಕೀಲರಾದ ವಿಶ್ವನಾಥ, ವಿಜಯ ಕರ್ನಾಟಕ ಪತ್ರಕರ್ತರಾದ ಕೆ.ವಿ. ಲಕ್ಷ್ಮೀನಾರಾಯಣ, ಡಿ.ಸಿ.ನರಸಿಂಹಮೂರ್ತಿ ಅಣ್ಣ, ನನ್ನೇಲ್ಲಾ ಕಷ್ಟ,ಸುಖಗಳಿಗೆ ಸಹಾಯ ಮಾಡುವ ಪಿಲ್ಲಣ್ಣ, ನಮ್ ಗುರುಗಳಾದ ಸುವರ್ಣ ಸ್ಟುಡಿಯೋ ಸೀನಪ್ಪ, ಶ್ರೀರಾಮಣ್ಣ, ನನಗೆ ಬದುಕಲು ನೆಲೆ ನೀಡಿರುವ ಸದಾ ನನಗೆ ಓಳ್ಳಯದನ್ನೇ ಬಯಸುವ ಪ್ರಸಾಧಣ್ಣ ಇಸ್ಟೆ ಅಲ್ಲಾ ನನ್ಬಗ್ಗೆ ಕಾಳಜಿಯಿರುವ ನನ್ನೆಲ್ಲಾ ಸ್ನೇಹಿತರು ಹೇಳುತ್ತಿದ್ದರೆ ಬರೆಯಲು ಜಾಗವೇ ಸಾಕಾಗುವುದಿಲ್ಲ. ಆದುದರಿಂದ ನನಗೆ ಜಗತ್ತೆ ಇಷ್ಟ...

ಜೀವನ 
ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಛಾಯಚಿತ್ರಣ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ, ಆರ್ಟ್ ಎಗ್ಸಿಬಿಶನ್, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಪ್ರಾಣ, ಅಂತರಜಾಲದಲ್ಲಿ ಜಾಲಾಡೋದು, ನವೀನ ರೀತಿಯ ತಂತ್ರಾಂಶಗಳ ಬಗ್ಗೆ ರಿಸರ್ಚು, ವೆಬ್ ಡಿಸೈನು, ಬ್ಲಾಂಗಿಂಗು, ಚಾಂಟಿಂಗು, ಅಪರೂಪಕ್ಕೆ ಹರಟೆ ಹೊಡೆಯಲು ಸಾಕಷ್ಟು ಚೆಡ್ಡಿ ದೊಸ್ತ್ಗಳು......... 

ಈ ಬ್ಲಾಗ್ಸ್ ಕೂಡ ನಂದೇ ನೋಡ್ತಿರಲ್ವ?

ಜವಬ್ದಾರಿ, ಆಸಕ್ತಿ: 


ಸಂಯುಕ್ತ ಕರ್ನಾಟಕ ದಿನಪತ್ರಿಕೆ  (ಅಂಕಣಕಾರ)
ಸಾಮಾನ್ಯನೆಡೆಗೆ ತಂತ್ರಜ್ಞಾನ ಎಂಬ ಶಿರ್ಷೀಕೆಯಡಿ ನೆಚ್ಚಿನ ದಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ ದಿನನಿತ್ಯ ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ, ಶಿಕ್ಷಣ ಹಾಗೂ ಉಪಯುಕ್ತ ಜಾಲತಾಣಗಳ ಬಗ್ಗೆ ಟೆಕ್ ಕನ್ನಡ ಎಂಬ ಅಂಕಣ ಬರವಣಿಗೆ. 
ಸಂಚಯನೆಲೆ ಸಂಸ್ಥೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) (ಸ್ವಯಃ ಸೇವಕ)
ಸುಮಾರು ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಂಪತಿಗಳಾದ ವಿಜಿಯಣ್ಣ ಹಾಗೂ ಯಶೋಧ ಮೇಡಂ ರವರ ಸಂಸ್ಥೆಯಲ್ಲಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ. 
ಆನೇಕಲ್ ನಾಗರೀಕ ವೇದಿಕೆ (ಸ್ವಯಃ ಸೇವಕ)
ಸುಮಾರು 30 ವರ್ಷಗಳಿಂದ ನಾಗರೀಕರ ಕುಂದುಕೊರತೆಗಳ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಕೆಲಸ ನಿರ್ವಹಣೆ.
ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ  (ಸ್ವಯಃ ಸೇವಕ)
ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸುಮಾರು ಹತ್ತಾರು ವರ್ಷಗಳಿಂದ ಏಕಲವ್ಯನಂತೆ ತಾವೋಬ್ಬರೇ ಆದರೂ ಪ್ರಾಣಿ ಪಕ್ಷಿಗಳನ್ನು ಪರಿಸರವನ್ನು ಉಳಿಸಬೇಕೆಂಬ ಚಲದಿಂದ ಯಾವುದೇ ಸ್ವಾರ್ಥವಿಲ್ಲದೆ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಒಂದು ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿರುವ ಬನ್ನೇರುಘಟ್ಟ ಮಂಜಣ್ಣನವರ ಸಂಸ್ಥೆಯಲ್ಲಿ  ನಾಗರೀಕರಲ್ಲಿ ಹಾಗೂ ಮಕ್ಕಳಲ್ಲಿ ಪರಿರಸ ನಮಗೆಷ್ಟು ಮುಖ್ಯ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸುವಿಕೆ.
ನಿರಂತರ ಪೌಂಡೇಶನ್ (ಸ್ವಯಃ ಸೇವಕ)
ವಿಧ್ಯಾಭ್ಯಾಸದಿಂದ ವಂಚಿತರಾದ ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕ ಬಡ ಮಕ್ಕಳನ್ನು ಸುಕ್ಷಿತರನ್ನಾಗಿ ಮಾಡಲು ಉಚಿತ ಜ್ಞಾನಾರ್ಜನೆ ನೀಡುತ್ತಿರುವ ಧಾನಗಳಲ್ಲಿ ಶ್ರೇಷ್ಠ ಧಾನ ವಿಧ್ಯಾ ಧಾನ ವೆಂದು ನಂಬಿ ತಮ್ಮೆಲ್ಲ ತನು, ಮನ, ಧನ ವನ್ನು ಧಾರೆಯೆರದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಸೇವೆ. 
ಆನೇಕಲ್ ತಾಲ್ಲೂಕು ಪೋಟೋಸ್ಟುಡಿಯೋ ಮಾಲೀಕರ ಸಂಘ (ಪ್ರಧಾನ ಕಾರ್ಯದರ್ಶಿ)

ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.

 ಇನ್ನೂ ಹಲವಾರು ಸರ್ಕಾರಿ ಹಾಗೂ ಖಾಸಗಿ ಸಂಘ, ಸಂಸ್ಥೆಗಳಲ್ಲಿ ಸದಸ್ಯತ್ವ.
 
ಕನ್ನಡ ಸಾಹಿತ್ಯ ಪರಿಷತ್ತು                                        >  ಅಜೀವ ಸದಸ್ಯತ್ವ
ಕರ್ನಾಟಕ ಛಾಯಾಚಿತ್ರ ಸಂಘ                                  >  ಅಜೀವ ಸದಸ್ಯತ್ವ

ಕರ್ನಾಟಕ ರಾಜ್ಯ ಯುವ ರೈತ ಸಂಘ                           >  ಅಜೀವ ಸದಸ್ಯತ್ವ
ಬೆಂಗಳೂರು ಜಿಲ್ಲಾ ಪೋಟೋ ಸ್ಟುಡಿಯೋ  ಮಾಲೀಕರ ಸಂಘ > ಅಜೀವ ಸದಸ್ಯತ್ವ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ                        > ಅಜೀವ ಸದಸ್ಯತ್ವ
ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಘ                 > ಅಜೀವ ಸದಸ್ಯತ್ವ

11 comments:

  1. Nice and Useful Blog......

    ReplyDelete
  2. ನೀಮ್ಮ ಈ ಸೇವೆ ಸದಾಕಾಲ ಉಳಿಯಲಿ. ದೇವರು ನೀಮ್ಮನ್ನು ಚೇನ್ನಾಗಿಡಲಿ.

    ReplyDelete
  3. Nice sir really very good hands off to your social works thanks once again......


    Nishanth Kolkar

    ReplyDelete
  4. Danya vadagalu anna nannagu ninnatarane agabekemb aase nimma samaja sevegen hands up nanna hesaru mantagouda dayavittu kannada da tantransh vannu tilisiri nanu kannada nadannu pujisuttene bhashe yannu pritisuttene

    ReplyDelete
  5. Danya vadagalu anna nannagu ninnatarane agabekemb aase nimma samaja sevegen hands up nanna hesaru mantagouda dayavittu kannada da tantransh vannu tilisiri nanu kannada nadannu pujisuttene bhashe yannu pritisuttene

    ReplyDelete
  6. Thimba interesting sir..... Keep going on..... Keep sharing your idea.s .


    Harinath k
    Malur(csc)

    ReplyDelete
  7. Thimba interesting sir..... Keep going on..... Keep sharing your idea.s .


    Harinath k
    Malur(csc)

    ReplyDelete