WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, February 28, 2011

ಎಸ್ ಎಂ ಎಸ್ ಕ್ರಾಂತಿ

 ನೀವು ಮೆಡಿಕಲ್ ಶಾಪ್ ಗೆ ಹೋಗಿ ಔಷಧಿ ಹಾಗೂ ಮಾತ್ರೆ ಕೋಳ್ಳುತ್ತೀರಿ. ಅದು ಅಸಲಿಯೋ ನಕಲಿಯೋ ಕಂಡುಹಿಡಿಯುವುದು ಹೇಗೆ, 'ನಮ್ಮ ಕೈಯಲಂತೂ ಸಾಧ್ಯವೇ ಇಲ್ಲ, ದೇವರ ಮೇಲೆ ಭಾರ ಕೊಳ್ಳುವುದು, ಎಂದು ಹತಾಶೆಯಿಂದ ಮರುಗಬೇಡಿ. ಇನ್ನು ಮುಂದೆ ಕೇವಲ ಒಂದು ಎಸ್ ಎಂ. ಎಸ್. ಮಾಡಿ ನೀವು ಕೊಂಡ ಔಷಧಿ ಅಸಲಿಯೋ, ನಕಲಿಯೋ ತಿಳಿದುಕೊಳ್ಳಬಹುದು.
ಹೌದು, ಕೇಂದ್ರ ಔಷಧ ಸಲಹಾ ಸಮಿತಿ ಔಷಧಗಳ ಮೇಲೆ ವಿಶೇಷ ಕೋಡ್ ನಮೂದಿಸಿ, ಅದರ ಬಗ್ಗೆ ಮಾಹಿತಿ ಒದಗಿಸುವ ಪ್ರಸ್ತಾಪಕ್ಕೆ ಓಕೆ ಎಂದಿದೆ. ಹೀಗಾಗಿ ಈ ಪ್ರಸ್ತಾಪವೀಗ ಔಷದ ತಾಂತ್ರಿಕ ಸಲಹಾ ಮಂಡಳಿ ಮುಂದಿದೆ. ಅಲ್ಲಿಯೂ ಓಕೆಯಾದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಂತಿಮ ಅದೇಶ ಹೊರಡಿಸಲಿದೆ.
ಈ ಆದೇಶ ಹೊರಬಿದ್ದಲ್ಲಿ ನಮ್ಮ ದೇಶದಲ್ಲಿ ಮಾರಲಾಗುವ ಪ್ರತಿಯೊಂದು ಔಷದದ ಮೇಲೂ 2ಡಿ ಬಾರ್ ಕೋಡ್ ಮತ್ತು ಯೂನಿಕ್ ರಾಂಡ್ಯಾಮ್ಲಿ ಜನರೇಟೆಡ್ ನ್ಯೂಮರಿಕ್ ಕೋಡ್ (ಯುಐಡಿ) ನಮೂದಿಸಲಾಗುತ್ತದೆ. ಈ ಬಾರ್ ಕೋಡ್ ನ ಮೇಲೆ ಪೋನ್ ನಂಬರನ್ನೂ ಹಾಕಲಾಗುತ್ತದೆ. ಔಷದಿ ಕೊಳ್ಳುವ ಗ್ರಾಹಕರು ಯುಐಡಿ ನಂಬರನ್ನು ಪೋನ್ ನಂಬರಗೆ ಎಸ್ ಎಂ ಎಸ್ ಮಾಡಿದರೆ ಸಾಕು, ಕೂಡಲೇ ಈ ಔಷದಿ ಅಸಲಿ ಹೌದೋ, ಅಲ್ಲವೋ ಎಂ ಮಾಹಿತಿ ನಿಮ್ಮ ಮೊಬೈಲ್ ಗೆ ಒಂದು ಸೇರುತ್ತದೆ. ಈ ರೀತಿ ಬಾರ್ ಕೋಡ್ ಅಂಟಿಸಲು ಹೆಚ್ಚೇನೂ ಖರ್ಚಾಗುವುದಿಲ್ಲ. ಹೆಚ್ಚೆಂದರೆ 30ಪೈಸೆಯಷ್ಟೆ ಖರ್ಚಾಗುತ್ತದೆಯಂತೆ. ಎಲ್ಲ ಔಷದ ತಯಾರಕರು ಈ ಸಿಸ್ಟಂ ಅಳವಡಿಸಿಕೊಂಡಲ್ಲಿ ಈ ಖರ್ಚು 10 ಪೈಸೆಗಿಳಿಯಲಿದೆ ಎಂದು ಡ್ರಗ್ ಕಂಟ್ರೋಲರ್ ಹೇಳಿದ್ದಾರೆ. ಆದರೆ ಸಣ್ಣ ಔಷಧ ತಯಾರಕರು ಖರ್ಚು ಜಾಸ್ತಿಯಾಗುತ್ತದೆ ಎಂದು ತಗಾದೆ ತೆಗೆದಿದ್ದಾರೆ. ಈ ಸಿಸ್ಟಂ ನಮ್ಮ ದೇಶದಲ್ಲಿಯೇ ಮೊದಲಿಗೆ ಜಾರಿಗೆ ಬರುತ್ತಿಲ್ಲ. ಈಗಾಗಲೇ ಇಟಲಿ, ಮಲೇಷಿಯಾ, ಐರೋಪ್ಯ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ನಕಲಿ ಔಷಧಗಳ ಮಾರಾಟದ ಮೇಲೆ ನಿಯತ್ರಣ ಸಾದಿಸಿವೆ. ನಮ್ಮ ದೇಶದಲ್ಲಿಯೂ ನಕಲಿ ಹಾವಳಿ ಜಾಸ್ತಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರವೇ ಮಾರಾಟವಾಗುತ್ತಿರುವ ಔಷಧಗಳಲ್ಲಿ ಶೇ5.6 ಕಳಪೆ ಗುಣಮಟ್ಟದವು ಮತ್ತು ಶೇ0.26 ನಕಲಿ ಔಷಧಿಗಳು. ಹೀಗಾಗಿ ಈ ಸಿಸ್ಟಂ ಅಳವಡಿಸುವುದು ಅತಿ ಅಗತ್ಯವಾಗಿದೆ. ಆದರೆ ಜಾರಿಗೆ ಬರಲು ಇನ್ನೆಷ್ಟು ದಿನ ಬೇಕೋ ?
ಹೆಚ್ಚಿನ ಮಾಹಿತಿಗೆ: http://www.maya-biotech.com

Thursday, February 24, 2011

ಶೀಘ್ರದಲ್ಲೇ 150 ರೂಪಾಯಿಗಳ ಮೌಲ್ಯದ ನಾಣ್ಯ


150 ರೂಪಾಯಿ ಮೌಲ್ಯದ ನಾಣ್ಯದಂತೆ 5 ರೂಪಾಯಿ ನಾಣ್ಯವನ್ನು ಕೂಡಾ ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ, ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿಗಳ ಮೌಲ್ಯದ ನಾಣ್ಯವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.


ಆದಾಯ ತೆರಿಗೆ ಇಲಾಖೆ (1860-2010) ಆರಂಭವಾಗಿ 150 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಬಜೆಟ್ ಭಾಷಣಕ್ಕಿಂತ ಮುಂಚೆ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ವಿತ್ತಸಚಿವಾಲಯದ ಆಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಸೂಚನೆಯನ್ನು ಹೊರಡಿಸಿದೆ.
150 ರೂಪಾಯಿ ನಾಣ್ಯವನ್ನು ಬೆಳ್ಳಿ, ತಾಮ್ರ, ಉಕ್ಕು ಮತ್ತು ಸತವುನಿಂದ ತಯಾರಿಸಲಾಗುತ್ತದೆ. ಅಂತಾರಾಷ್ಟ್ರೀಯ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ‘ಸತ್ಯಮೇವ ಜಯತೇ’ ಮತ್ತು ‘ಭಾರತ’ ಹಾಗೂ ಹಿಂಭಾಗದಲ್ಲಿ ‘ಚಾಣಕ್ಯ’ನ ಭಾವಚಿತ್ರ ಮತ್ತು ಜೇನುಹುಳುವಿನೊಂದಿಗಿರುವ ಕಮಲದ ಚಿತ್ರವಿರುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನೆನಪಿನಂಗವಾಗಿ, ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tuesday, February 15, 2011

ಮನೆಮನೆ ಮತಯಾಚನೆ ನಿಷೇಧ. ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ : ಎಸ್.ವೈ.ಖುರೇಷಿ


 
ಚುನಾವಣೆಯ ನಿರ್ಣಾಯಕ ಹಂತವಾದ ಮತದಾನಕ್ಕೂ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸುವುದೂ ಸೇರಿದಂತೆ ಎಲ್ಲ ಬಗೆಯ ಪ್ರಚಾರವನ್ನೂ ನಿಷೇಧಿಸುವತ್ತ ಕೇಂದ್ರ ಚುನಾವಣಾ ಆಯೋಗ ಹೆಜ್ಜೆಯಿಟ್ಟಿದೆ.
ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ನಗರದ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಈ ವಿಷಯ ಪ್ರಕಟಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರವನ್ನು ಮಾತ್ರ ನಿಷೇಧಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆಗೆ ತೆರಳಿ ಮತ ಯಾಚಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಮತದಾರರಿಗೆ ಹಣ, ವಸ್ತುಗಳು ಮತ್ತು ಮದ್ಯ ವಿತರಿಸಿ ಆಮಿಷ ಒಡ್ಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರವನ್ನೂ ನಿಷೇಧಿಸಲು ಆಯೋಗ ಯೋಚಿಸಿದೆ.
‘ಮತದಾನಕ್ಕೂ ಮುಂಚಿನ ಅವಧಿಯಲ್ಲಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ಖುರೇಷಿ ಹೇಳಿದರು.
‘ಮತದಾರರು ಯಾವುದೇ ಪೂರ್ವಗ್ರಹ ಇಲ್ಲದೇ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಾಗಲೀ, ಅವರ ಬೆಂಬಲಿಗರಾಗಲೀ ಮತದಾರರನ್ನು ಸಂಪರ್ಕಿಸದಂತೆ ನಿಷೇಧ ಹೇರಲು ಚಿಂತನೆ ನಡೆದಿದೆ. ಮತದಾನಕ್ಕೂ ಮುನ್ನ ಮತದಾರರಿಗೆ ಆಮಿಷ ಒಡ್ಡಲು ಅವಕಾಶ ಇಲ್ಲದಿದ್ದರೆ ಮುಕ್ತ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುತ್ತದೆ’ ಎಂದರು.
‘ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವ ಮತ್ತು ಚುನಾವಣೆಯ ದಿನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ನಿಗಾ ಇಡುವ ಅಗತ್ಯವಿದೆ. ‘ಕಾಸಿಗಾಗಿ ಸುದ್ದಿ’ ಸಮಸ್ಯೆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಿಷೇಧಿಸಲೇಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶುದ್ಧೀಕರಣವೇ ಗುರಿ: ತ್ವರಿತಗತಿಯಲ್ಲಿ ಚುನಾವಣಾ ಸುಧಾರಣೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿದ ಖುರೇಷಿ, ‘ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದೇ ನನ್ನ ಮೊದಲ ಕಾರ್ಯಸೂಚಿ’ ಎಂದರು.
‘ಐದು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪದಡಿ ವಿಚಾರಣೆ ಎದುರಿಸುತ್ತಿರುವವರನ್ನು ಅನರ್ಹಗೊಳಿಸುವ ಸಂಬಂಧ ‘ಪ್ರಜಾಪ್ರತಿನಿಧಿ ಕಾಯ್ದೆ-1951’ರ ಕಲಂ 8ಕ್ಕೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2004ರಲ್ಲೇ ಸಲಹೆ ಮಾಡಿತ್ತು. ಈ ಅವಕಾಶ ದುರುಪಯೋಗ ಆಗದಂತೆ ತಡೆಯಲು ಚುನಾವಣೆಗೂ ಆರು ತಿಂಗಳ ಮುನ್ನ ದಾಖಲಾದ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕೆಂಬ ಅಂಶ ತಿದ್ದುಪಡಿಯಲ್ಲಿರಬೇಕು’ ಎಂದು ಪ್ರತಿಪಾದಿಸಿದರು.
ಶೀಘ್ರದಲ್ಲಿ ಕಾಯ್ದೆಗೆ ತಿದ್ದುಪಡಿ: ದೇಶದ ಚುನಾವಣಾ ವ್ಯವಸ್ಥೆಗೆ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆದು ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ವಲಯದ ಪ್ರಮುಖರು ಸೇರಿದಂತೆ ಚುನಾವಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಸಲಹೆ ಪಡೆದ ಬಳಿಕ ಚುನಾವಣಾ ಸುಧಾರಣೆ ಪ್ರಸ್ತಾವವನ್ನು ಅಂತಿಮಗೊಳಿಸಲಾಗುವುದು ಎಂದರು.
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸುವುದು ಚುನಾವಣಾ ಸುಧಾರಣೆಯ ಮುಖ್ಯ ಅಂಶ. ಅದರೊಂದಿಗೆ ಚುನಾವಣಾ ವೆಚ್ಚ, ಗಂಭೀರವಲ್ಲದ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಮತ್ತು ವಾಪಸ್ ಪಡೆಯುವುದು, ಆಸ್ತಿ ಮತ್ತು ಬಾಧ್ಯತೆಗಳ ವಿವರ ಪ್ರಕಟ ಮತ್ತಿತರ ಅಂಶಗಳೂ ಈ ಸುಧಾರಣೆಯ ಭಾಗವಾಗಲಿವೆ ಎಂದು ಮೊಯಿಲಿ ಹೇಳಿದರು.
‘ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಸಮಿತಿಯು ಈಗಾಗಲೇ ಐದು ಪ್ರಾದೇಶಿಕ ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದು, ಸಲಹೆಗಳನ್ನು ಸ್ವೀಕರಿಸಿದೆ. ಚುನಾವಣಾ ವ್ಯವಸ್ಥೆಯನ್ನು ಬಲಗೊಳಿಸುವ ಸಂಬಂಧ ಸಲಹೆ ಪಡೆಯಲು ಏಪ್ರಿಲ್ 2 ಮತ್ತು 3ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಸಭೆ ನಡೆಯಲಿದೆ. ಬಳಿಕ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಸಮಗ್ರ ತಿದ್ದುಪಡಿ ತರಲಾಗುವುದು’ ಎಂದರು.
‘ಚುನಾವಣಾ ಸಂಬಂಧಿ ಕಾಯ್ದೆಗಳಲ್ಲಿ ಇರುವ ಲೋಪಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸರಿಪಡಿಸುವ ನೀಲಿನಕ್ಷೆಯೂ ಸಿದ್ಧವಿದೆ. ಈಗ ಜನತೆಯ ಅಭಿಪ್ರಾಯವನ್ನು ಪಡೆಯೋಣ. ಸುಧಾರಣೆಯ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುವ ಜನಾಭಿಪ್ರಾಯವನ್ನು ಸಂಸತ್ತು ತಿರಸ್ಕರಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕಿದೆ. ಇದಕ್ಕಾಗಿ ಕ್ರಿಮಿನಲ್ ನ್ಯಾಯ ಪದ್ಧತಿಯನ್ನು ಶುಚಿಗೊಳಿಸಬೇಕಿದೆ. 2012ರ ಡಿಸೆಂಬರ್ ಬಳಿಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಅವಧಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ನ್ಯಾಯಾಂಗದಲ್ಲೂ ಸುಧಾರಣೆ ತರಲಾಗುವುದು ಎಂದರು.

Sunday, February 13, 2011

ಇನ್ಮುಂದೆ ಟ್ರಾಫಿಕ್ ಚಿಂತೆ ಯಾಕೆ…? ವರ್ಷಾಂತ್ಯಕ್ಕೆ “ಹಾರುವ ಕಾರು”.. ಮಾರುಕಟ್ಟೆಗೆ



ಟ್ರಾಫಿಕ್ ಜಾಮ್‌ನಿಂದ ಬೇಸರಗೊಂಡಿರುವಿರಾ? ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ.ಅಮೆರಿಕದ ಬೊಸ್ಟೊನ್ ಮೂಲದ ಟೆರ್ರಾಫ್ಯೂಗಿಯಾ ಟ್ರಾನ್ಸಿಶನ್ ಕಂಪೆನಿ ‘ಹಾರುವ ಕಾರು’(ಟ್ರಾನ್ಸಿಶನ್ ರೊಡೆಬಲ್ ಲೈಟ್ ಸ್ಪೋರ್ಟ್ ಏರ್‌ಕ್ರಾಫ್ಟ್) ಉತ್ಪಾದನೆಯನ್ನು ಆರಂಭಿಸಿದ್ದು. ಕೇವಲ 30 ಸೆಕೆಂಡ್‌ಗಳ ಸಮಯದೊಳಗೆ ಕಾರು ವಿಮಾನವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿಕೆ ನೀಡಿದೆ. 
‘ಹಾರುವ ಕಾರು’ ಆಕಾಶದಲ್ಲಿ ಪ್ರತಿ ಗಂಟೆಗೆ 185 ಕಿ.ಮೀ ವೇಗದಲ್ಲಿ ಹಾರಲಿದೆ. ಹಾಗೂ ರಸ್ತೆಯ ಮೇಲೆ ಪ್ರತಿ ಗಂಟೆಗೆ 105 ಕಿ.ಮೀ ದೂರವನ್ನು ಕ್ರಮಿಸಲಿದೆ.ಕಾರಿಗೆ ಸಾಮಾನ್ಯ ಪೆಟ್ರೋಲ್ ಪಂಪ್‌ನಲ್ಲಿ ಇಂಧನವನ್ನು ತುಂಬಿಕೊಳ್ಳಬಹುದಾಗಿದೆ ಎಂದು ಸಂಡೇ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಹಾರುವ ಕಾರು’ ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹಾರುವ ಕಾರಿನ ದರ ಅಂದಾಜು ಕನಿಷ್ಠ 92,39,850 ರೂಪಾಯಿಗಳಿಂದ ಗರಿಷ್ಠ 1,18,40,000 ರೂಪಾಯಿಗಳವರೆಗೆ ನಿಗದಿಪಡಿಸುವ ಸಾಧ್ಯತೆಗಳಿವೆ ಎಂದು 
ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಟೆರ್ರಾಫ್ಯೂಗಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್ ಗೆರ್ಶ್ ಮಾತನಾಡಿ, ವಾರ್ಷಿಕವಾಗಿ 200 ಹಾರುವ ಕಾರುಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ. ವಿಮಾನದಂತೆ ‘ಹಾರುವ ಕಾರಿನಲ್ಲಿ’ 400 ದಿಂದ 450 ಮೈಲುಗಳವರೆಗೆ ಹಾರಾಟ ನಡೆಸಬಹುದಾಗಿದೆ. ಈಗಾಗಲೇ 100 ಕಾರುಗಳಿಗೆ ಬೇಡಿಕೆ ಬಂದಿದೆ. ಕೆಲ ಬದಲಾವಣೆಗಳನ್ನು ಮಾಡುವ ಅಗತ್ಯವಿದ್ದು, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎಂದು ಹೇಳಿದ್ದಾರೆ.
ಹಾರುವ ಕಾರಿನ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಂಶೋಧನೆಗೊಳಪಡಿಸಲಾಗಿದ್ದು, 28 ಬಾರಿ ಹಾರಾಟದ ಪರೀಕ್ಷೆ ನಡೆಸಲಾಗಿದೆ ಎಂದು ಕಂಪೆನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Saturday, February 12, 2011

ಅಂತರ್ಜಾಲ ದಿನ ಪತ್ರಿಕೆಗಳು








 














ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು

ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು ಬೆಂಗಳೂರಿನ ಗ್ರಾಹಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.ಸಲ್ಲಿಸಬೇಕಾದ ಚೀಟಿ,ವಿದ್ಯುತ್ ಬಿಲ್ ಮತ್ತು ಅನಿಲ ಸಂಪರ್ಕದ ವಿವರವನ್ನು ಸ್ಕ್ಯಾನ್ ಮಾಡಿ,ಆನ್‌ಲೈನಿನಲ್ಲೇ ಸಲ್ಲಿಸಲು ಅವಕಾಶವಿದೆ.ನೌಕರಿಯಲ್ಲಿರುವವರು,ರಜೆ ಹಾಕಿ ಅಂಗಡಿಗೆ ಮುಖತ: ಭೇಟಿ ನೀಡುವುದನ್ನು ತಪ್ಪಿಸುವ ಸ್ತುತ್ಯರ್ಹ ಪ್ರಯತ್ನವಿದು.ವೆಬ್ ವಿಳಾಸ:http://web5.kar.nic.in/fcslpg/main.aspx

Friday, February 11, 2011

ವಿಶ್ವಕಂಡ ಮಹಾನ್ ಸೈಂಟಿಸ್ಟ್ ತೊಮಸ್ ಆಲ್ವ ಎಡಿಸನ್ ರ 164ನೇ ಜನ್ಮ ದಿನಾಚಾರಣೆ

 

ಇಂದು ವಿಶ್ವಕಂಡ ಅತಿ ಶ್ರೇಷ್ಟ ಸಂಶೋದಕ scintist ತೊಮಸ್ ಅಲ್ವ ಎಡಿಸನ್ ರ 164ನೇ ಹುಟ್ಟು ಹಬ್ಬ ಅಚೆರಿಸುತ್ತಿದೆ. February 11, 1847 ರಲ್ಲಿ ಅಮೆರಿಕದ ಪುಟ್ಟ ನಗರವಾದ ಮಿಲನ್, ಒಹಿಯೊ ರಲ್ಲಿ ಜನಿಸಿದ ಈ ಮಹಾನ್ ಸಂಶೋದಕರದ ಇಂದು ನಾವೆಲ್ಲರು ಉಪಯೋಗಿಸುವ ಬೆಳಕು ಬೀರುವ ಬಲ್ಪ್ ನ್ನು ಕಂಡು ಹಿಡಿದ ಮಾಹಾನ್ ಸೈಂಟಿಸ್ಟ್. ತನ್ನ 84ನೇ ಪ್ರಾಯದಲ್ಲಿ October 18, 1931 ರಂದು ವಿಧಿವಶರಾದರು.

Wednesday, February 9, 2011

ಇದಪ್ಪಾ ಕ್ರಿಯೇಟಿವ್…!

ಇತ್ತೀಚೆಗೆ ಜಾಹೀರಾತು ಪ್ರಪಂಚ ಬೃಹತ್ತಾಗಿ ಹಬ್ಬಿದೆ. ಅದೂ ಕೂಡ ಒಂದು ಉದ್ಯಮವಾಗಿ ಬೆಳೆದಿದೆ, ಬೆಳೆಯುತ್ತಿದೆ. ಸದಾ ಕ್ರಿಯಾಶೀಲವಾಗಿ ಯೋಚಿಸುವವನು ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ವಿಭಿನ್ನವಾಗಿ ಯೋಚಿಸದೇ ಸದಾ ಒಂದೇ ರೀತಿ ಕೆಲಸ ಮಾಡುವವನಿಗೆ ಬೇಡಿಕೆಯೂ ಕಡಿಮೆ, ಫ್ಯೂಚರ್ ಕೂಡ ಇರುವುದಿಲ್ಲ.
ಈ ಕೆಳಗಿನ ಚಿತ್ರಗಳನ್ನು ನೋಡಿ ಕ್ರಿಯೇಟಿವ್ ಎಂಬ ಪದಕ್ಕೆ ಅರ್ಥ ಬರುತ್ತದೆ.


ಜನಗಣತಿಗೆ ಮಾಹಿತಿ ನೀಡಿ ಸಹಕರಿಸಿ

ಇದೇ 9ರಿಂದ 28ರವರೆಗೆ ನಡೆಯುವ 2011ರ ಜನಗಣತಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶದಲ್ಲಿ ನಡೆಯುತ್ತಿರುವ ಏಳನೇ ಜನಗಣತಿ ಇದಾಗಿದ್ದು, ಮನೆ ಗಣತಿ ನಂತರ ಜನಗಣತಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ದಿನಗಳ ಕಾಲ ನಡೆಯುವ ಜನಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಗಣತಿದಾರರು ಮನೆಗೆ ಬಂದಾಗ ಅವರು ಕೇಳುವ 29 ಪ್ರಶ್ನೆಗಳಿಗೆ ಉತ್ತರ ನೀಡಬೇಕು.ಮುಗಿದಿರುವ ಮನೆ ಗಣತಿಯ ಮಾಹಿತಿಯನ್ನು ಸದ್ಯದಲ್ಲೇ ಪ್ರಕಟಿಸಲಾಗವುದು. ಜನಗಣತಿಯ ತಾತ್ಕಾಲಿಕ ಪಟ್ಟಿಯನ್ನು ಮಾರ್ಚ್ ಕೊನೆ ವಾರದಲ್ಲಿ ಪ್ರಕಟಿಸಲಾಗುವುದು.
ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಚಟುವಟಿಕೆ ಎಂದು ಹೇಳಲಾದ ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ರಾಜ್ಯದ 176 ತಾಲ್ಲೂಕು, 220 ಪಟ್ಟಣ, 127 ಜನಗಣತಿ ಪಟ್ಟಣ, 22 ನಗರ ಸಮೂಹಗಳು, 29,340 ಗ್ರಾಮಗಳಲ್ಲಿ ಜನಗಣತಿ ನಡೆಸಲಾಗುತ್ತದೆ. ಇವುಗಳನ್ನು 1,26,519 ಜನಸಂಖ್ಯಾ ಗಣತಿ ಬ್ಲಾಕುಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 1,03,523 ಮಂದಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. 17,254 ಮಂದಿ ಮೇಲ್ವಿಚಾರಕರು ಮತ್ತು 2,297 ಮಂದಿ ಪರಿಣತರಾದ ತರಬೇತುದಾರರು ನೋಡಿಕೊಳ್ಳಲಿದ್ದಾರೆ.
ಜನಗಣತಿ ಮುಗಿದ ನಂತರ ಅಂದರೆ, ಫೆ.28ರ ರಾತ್ರಿ ವಸತಿ ರಹಿತರ ಗಣತಿಯನ್ನು ಮಾಡಲಾಗುವುದು. ಇದರ ನಂತರ ಮಾರ್ಚ್ 1ರಿಂದ 5ರವರೆಗೆ ಪುನರ್ ಸಂದರ್ಶನ ಸುತ್ತನ್ನು ಕೈಗೊಳ್ಳಲಾಗುವುದು. ಇದರ ನಡುವೆ ಅಲ್ಲಲ್ಲಿ ತಪಾಸಣೆ ಮಾಡಲಾಗುತ್ತದೆ. ಮಾಹಿತಿ ದೋಷ ಇದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ.
ಪ್ರತಿಯೊಂದು ಅರ್ಜಿಗೂ ಬಾರ್‌ಕೋಡ್ ನೀಡಿದ್ದು, ಅದರಿಂದ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಸುತ್ತಿರುವುದರಿಂದ ಜನಗಣತಿಯ ಮಾಹಿತಿಯನ್ನು ಮನೆ ಗಣತಿ ಜತೆಗೆ ಸೇರಿಸಬಹುದಾಗಿದೆ. ಎಲ್ಲ ಪಟ್ಟಣಗಳಲ್ಲಿನ ಕೊಳೆಗೇರಿ ಪ್ರದೇಶಗಳಿಗೆ ಪ್ರತ್ಯೇಕವಾದ ಗಣತಿ ಬ್ಲಾಕುಗಳನ್ನು ರಚಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಗಣತಿ ಬ್ಲಾಕ್‌ಗಳಿಗೆ ಜಿ.ಐ.ಎಸ್ ಆಧಾರಿತ ನಕ್ಷೆಗಳನ್ನು ನೀಡಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಿಗೆ ಗ್ರಾಮದ ನಕ್ಷೆಗಳನ್ನು ನೀಡಲಾಗಿದೆ.
ಇದೇ ಮೊದಲ ಬಾರಿಗೆ ಸ್ತ್ರೀ-ಪುರುಷ ಲಿಂಗಗಳ ಜತೆಗೆ ಮೂರನೆ ಲಿಂಗವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಗೋಪ್ಯ: ಜನಗಣತಿ ಸಂದರ್ಭದಲ್ಲಿ ನೀಡುವ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು. ಅಂಕಿಸಂಖ್ಯೆಗಳನ್ನು ಮಾತ್ರ ತೆಗೆದುಕೊಂಡು, ಉಳಿದ ವೈಯಕ್ತಿಕ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಮಾಹಿತಿ ಸಂಗ್ರಹಿಸುವ ಕೆಲಸವನ್ನು ಈ ಸಲವೂ ಹೆಚ್ಚಾಗಿ ಶಿಕ್ಷಕರೇ ಮಾಡಲಿದ್ದಾರೆ. ಅರ್ಧ ದಿನ ಜನಗಣತಿ, ಉಳಿದ ಅರ್ಧ ದಿನ ಶಾಲೆಗಳಿಗೆ ಹೋಗಲು ಸೂಚಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.
ಸಹಾಯವಾಣಿ : ಜನಗಣತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಶುಲ್ಕ ರಹಿತ ಸಹಾಯವಾಣಿ ಸ್ಥಾಪಿಸಲಾಗಿದೆ.
                      ಅದರ ಸಂಖ್ಯೆ 1800 345 011.
ವೆಬ್‌ಸೈಟ್ ವಿಳಾಸ-  www.censuskarnataka.gov.in

Tuesday, February 1, 2011

ಕುವೆಂಪು ತಂತ್ರಾಂಶ ಹೊಸ ಆವೃತ್ತಿ ಬಿಡುಗಡೆ

ಹಂಪಿ ಕನ್ನಡ ವಿವಿ ಸಿದ್ಧಗೊಳಿಸಿರುವ ಕುವೆಂಪು ಕನ್ನಡ ತಂತ್ರಾಂಶದ ಹೊಸ ಆವೃತ್ತಿ ಫೆ.2ರಂದು ಬಿಡುಗಡೆಯಾಗಲಿದೆ. ವಿಶಿಷ್ಟ ವಿನ್ಯಾಸದ ಬದಲಾವಣೆಗಳೊಂದಿಗೆ ಸುಧಾರಿತ ಆವೃತ್ತಿ 2.0 ತಂತ್ರಾಂಶ ವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಡಾ. ಎ. ಮುರಿಗೆಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

2ನೇ ಆವೃತ್ತಿಯ ತಂತ್ರಾಂಶದಲ್ಲಿ ಮೊದಲ ಆವೃತ್ತಿಯ ಎಲ್ಲಾ ಅಂಶಗಳ ಜತೆಗೆ ನೂತನವಾಗಿ 3 ಬಗೆಯ ಪರಿವರ್ತಕಗಳು ಮತ್ತು 1 ಬಗೆಯ ಕೀಲಿಮಣೆ ವಿನ್ಯಾಸ, ಸೋನಾಟಾ ಸಾಫ್ಟ್ ವೇರ್ ಕಂಪೆನಿ ಸಹಕಾರದಿಂದ ಪ್ರಕಾಶಕ್ ತಂತ್ರಾಂಶದ ಪ್ರಜಾ ಅಕ್ಷರ ವಿನ್ಯಾಸಗಳಲ್ಲಿ ಆಯ್ದ 4 ಮಾದರಿಗಳನ್ನು ಅಳವಡಿಸಲಾಗಿದೆ.

ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1: ಅನು, ಎಸ್ ಆರ್ ಜಿ ಹಾಗೂ ಶ್ರೀಲಿಪಿ ಫಾಂಟ್ ಗಳನ್ನು ಬೆಂಬಿಲಿಸುವುದರ ಜೊತೆಗೆ ನಾಲ್ಕು ಬಗೆ ಕೀಲಿಮಣೆ ವಿನ್ಯಾಸ ಹಾಗೂ ನಾಲ್ಕು ಟೆಕ್ಸ್ ಪರಿವರ್ತಕಗಳನ್ನು ಹೊಂದಿದೆ. ANSI ಮಾದರಿ ಫಾಂಟ್ ಮಾತ್ರ ಬಳಕೆಯಾಗುತ್ತಿದ್ದು, ಪತ್ರಿಕಾ ವಿನ್ಯಾಸಗಾರರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಶೈಲಿಯ ಫಾಂಟ್ ಗಳನ್ನು ರೂಪಿಸಲಾಗಿದೆ. ಆದರೆ, ಇದು ಹೆಚ್ಚು ಕಡೆ ಇನ್ನೂ ಬಳಕೆಯಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಚಂದ್ರಶೇಖರ ಕಂಬಾರರು ತಂತ್ರಾಂಶ ಯೋಜನೆಗೆ 6 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅನುಭವ, ಆಶಯದೊಂದಿಗೆ ತಂತ್ರಾಂಶ ರಚಿಸಲಾಗಿತ್ತು.

ಯಾರಿಗೆ ಉಪಯೋಗ: ಕನ್ನಡ ಬೆರಳಚ್ಚುಗಾರರು, ಡಿಟಿಪಿ ಆಪರೇಟರ್ ಗಳು, ವಿನ್ಯಾಸಗಾರರು, ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದು. ಸದ್ಯದಲ್ಲೇ ಕುವೆಂಪು ತಂತ್ರಾಂಶದ ಯೂನಿಕೋಡ್ ಆವೃತ್ತಿ ಹೊರ ಬೀಳಲಿದ್ದು ಅಂತರ್ಜಾಲದಲ್ಲಿ ವಿಹರಿಸುವವರು, ಚಾಟ್ ಮಾಡುವವರು, ಪತ್ರ ಬರೆಯುವವರು ಎಲ್ಲರಿಗೂ ಅನುಕೂಲವಾಗಲಿದೆ.

ಮಾಹಿತಿ ಕಣಜವಾಗಲಿದೆ: ತಂತ್ರಾಂಶದೊಂದಿಗೆ ಕನ್ನಡ ಕಾರ್ಪಸ್ ನಿರ್ಮಾಣ ಯೋಜನೆ ಮಾಡಲಾಗುವುದು. ಇದರಿಂದ ಕನ್ನಡ ಇ-ನಿಘಂಟು(ಸುಮಾರು 1 ಕೋಟಿ ಪದ ಸಂಗ್ರಹ), ಸಮಗ್ರ ಕನ್ನಡ ವ್ಯಾಕರಣ ರಚನೆ ಇತ್ಯಾದಿಗಳನ್ನು ನಿರ್ಮಿಸಲಾಗುವುದು. ಆನ್‌ಲೈನ್ ಡಿಕ್ಷ್‌ನರಿ, ಕನ್ನಡ ಒಸಿಆರ್ ತಂತ್ರಾಂಶ, ಸಂಭಾಷಣೆಯನ್ನು ಶಬ್ದರೂಪದಲ್ಲಿ ಪರಿವರ್ತಿಸುವ ತಂತ್ರಾಂಶ, ಸ್ಪೆಲ್ಲಿಂಗ್ ಚೆಕ್ ಭಾಷಾಂತರ ದತ್ತ ಕಣಜ, ಸಂಶೋಧನಾ ಕರ್ನಾಟಕ, ವಿದ್ಯಾರ್ಥಿ ಗಳಿಗೆ ಬೋಧನೆ ಮತ್ತು ತರಬೇತಿ, ವೆಬ್‌ಸೈಟ್ ಮರುವಿನ್ಯಾಸ, ಡಿಜಿಟಲ್ ಸ್ಟುಡಿಯೊ, ಲೈಬ್ರರಿ, ಲ್ಯಾಂಗ್ವೇಜ್ ಲರ್ನರ್, ಆಡಿಯೊ-ವೀಡಿಯೊ ರೆಕಾರ್ಡಿಂಗ್ ಲ್ಯಾಬ್ ಸೇರಿದಂತೆ ಹಲವು ಯೋಜನೆ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುರಿಗೆಪ್ಪ ಹೇಳಿದರು.

ಈ ತಂತ್ರಾಂಶ ಉಚಿತವೇ: ಹೌದು, ಹಂಪಿ ವಿಶ್ವವಿದ್ಯಾಲಯ ಹೊರ ತರುತ್ತಿರುವ ಈ ತಂತ್ರಾಂಶ ವಿಶ್ವವಿದ್ಯಾಲಯದ ವೆಬ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ಆದರೆ, ಈ ತಂತ್ರಾಂಶವನ್ನು ಓಪನ್ ಸೋರ್ಸ್ ಆಗಿ ನೀಡುತ್ತಾರೆಯೇ? ಅಥವಾ ಈ ಹಿಂದಿನಂತೆ source on demand ಎಂದು ಹೇಳುತ್ತಾರೋ ಎಂದು ಕಾದು ನೋಡಬೇಕಿದೆ.

Thursday, January 27, 2011

'ಪ್ರಜಾವಾಣಿ'ಯ ಹೊಸ ಜಾಲ ತಾಣ

ಪ್ರಿಯ ಓದುಗರೇ
ಆಧುನಿಕ ಅಗತ್ಯಗಳಿಗೆ ತಕ್ಕಂತೆ ಪುನರ್ ವಿನ್ಯಾಸಗೊಳಿಸಿದ ಪ್ರಜಾವಾಣಿ ಅಂತರ್ಜಾಲ ತಾಣ http://beta.prajavani.net ಗಣರಾಜ್ಯ ದಿನದಿಂದ (26 ಜನವರಿ 2011) ನಿಮ್ಮ ಮುಂದೆ..
63 ವರ್ಷಗಳಷ್ಟು ಅವಧಿಯ ಪತ್ರಿಕೋದ್ಯಮದಲ್ಲಿ ~ಪ್ರಜಾವಾಣಿ~ ಕಾಲಕ್ಕೆ ಅನುಗುಣವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಕನ್ನಡ ಜಗತ್ತು ಕರ್ನಾಟಕವೆಂಬ ಭೌಗೋಳಿಕ ಎಲ್ಲೆಯನ್ನು ಮೀರಿ ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದು ಮಾಹಿತಿ ತಂತ್ರಜ್ಞಾನ. ಕನ್ನಡದಲ್ಲಿ ಅಂತರ್ಜಾಲ ತಾಣಗಳುಸಾಧ್ಯ ಎಂಬುದು ಅರಿವಾದ ಆರಂಭದ ದಿನಗಳಲ್ಲೇ ~ಪ್ರಜಾವಾಣಿ~ಯನ್ನು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸಲು ಹುಟ್ಟಿಕೊಂಡದ್ದು http://prajavani.net. ಅಂತರ್ಜಾಲದಲ್ಲಿ ~ಪ್ರಜಾವಾಣಿ~ಯನ್ನು ಓದುವವರಿಗೂ ಮುದ್ರಿತ ಆವೃತ್ತಿಯ ಅನುಭವವನ್ನೇ ನೀಡುವ ಸಾಧ್ಯತೆಯನ್ನು ತಂತ್ರಜ್ಞಾನ ತೆರೆದಿಟ್ಟಾಗ ಹುಟ್ಟಿಕೊಂಡದ್ದು http://www.prajavaniepaper.com. ಕಂಪ್ಯೂಟರ್‍ನಲ್ಲಿ ಕನ್ನಡ ಲಿಪಿಯನ್ನು ಇಂಗ್ಲಿಷ್‍ನಂತೆಯೇ ಸುಲಲಿತವಾಗಿ ಬಳಸಲುಅನುಕೂಲವಾಗುವಂತೆ ಜಾಗತಿಕ ಶಿಷ್ಟತೆಯಾದ ಯೂನಿಕೋಡ್ ಬಳಕೆಗೆ ಬಂದಾಗ ಅದನ್ನು ಬಳಸಿಕೊಂಡ ಕನ್ನಡ ಪತ್ರಿಕೆಗಳ ಜಾಲ ತಾಣಗಳಲ್ಲಿಮೊದಲನೆಯದ್ದೆಂಬ ಹೆಗ್ಗಳಿಕೆ ಕೂಡಾ ಪ್ರಜಾವಾಣಿಯದ್ದೇ.
ಈಗ ಪ್ರಜಾವಾಣಿ ಮತ್ತೊಂದು ಹಂತಕ್ಕೇರುತ್ತಿದೆ. ಅಂತರ್ಜಾಲದ ಹೊಸ ಸಾಧ್ಯತೆಗಳು ಮತ್ತು ವೆಬ್ ವಿನ್ಯಾಸಕ್ಕೆ ತಂತ್ರಜ್ಞಾನ ಒದಗಿಸಿಕೊಟ್ಟಿರುವ ಅವಕಾಶಗಳನ್ನು ಬಳಸಿಕೊಂಡು ಪ್ರಜಾವಾಣಿಯ ಅಂತರ್ಜಾಲ ತಾಣವನ್ನು ಪುನರ್ ವಿನ್ಯಾಸಗೊಳಿಸಲಾಗಿದೆ (http://beta.prajavani.net). ಈ ವಿನ್ಯಾಸ ಇಂಟರ್‍ನೆಟ್ ಎಕ್ಸ್‍ಪ್ಲೋರರ್, ಫೈರ್‍ಫಾಕ್ಸ್, ಕ್ರೋಮ್‍ನ ಹೊಸ ಆವೃತ್ತಿಗಳಲ್ಲಿ ನೋಡಲು ಅನುವಾಗುವಂತಿದೆ.
ಎಲ್ಲಾ ಸುದ್ದಿಗಳು, ಲೇಖನಗಳು ಮತ್ತು ಪುರವಣಿಗಳನ್ನು ತಲುಪಲು ಸುಲಭವಾಗುವಂತೆ ಹೊಸ ವಿನ್ಯಾಸವಿದೆ. ಛಾಯಾಚಿತ್ರಗಳನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ವಿನ್ಯಾಸ ಅವಕಾಶ ಕಲ್ಪಿಸಿದೆ. ಮುಂದಿನ ಹಂತಗಳಲ್ಲಿ ತಂತ್ರಜ್ಞಾನದ ಇನ್ನೂ ಹಲವು ಸಾಧ್ಯತೆಗಳನ್ನು ಕನ್ನಡ ಜಗತ್ತಿಗೆ ಒದಗಿಸಿಕೊಡುವ ಆಸೆ ನಮ್ಮದು. ಇದು ನಿಮಗೆ ಇಷ್ಟವಾಗುತ್ತದೆ, ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತದೆ ಎಂಬ ನಂಬಿಕೆಯೂ ನಮ್ಮದು.
ಹೊಸ ವಿನ್ಯಾಸ ಕುರಿತ ನಿಮ್ಮ ಅಭಿಪ್ರಾಯ, ಟೀಕೆ, ಸಲಹೆ, ಸುಧಾರಣೆಯ ಸಾಧ್ಯತೆ ಕುರಿತ ಅನಿಸಿಕೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಬರಹದ ಕೆಳಗೇ ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಬಹುದು. ಅಥವಾ ಫೀಡ್ ಬ್ಯಾಕ್ ಫಾರ್ಮ್ ತುಂಬುವ ಮೂಲಕವೂ ನಮ್ಮನ್ನು ತಲುಪಬಹುದು. ಸದ್ಯ ನಿಮ್ಮ ಮುಂದಿರುವುದು ಪ್ರಾಯೋಗಿಕ ಆವೃತ್ತಿಯಾಗಿರುವುದರಿಂದ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಅವುಗಳ ಕುರಿತು ನಮಗೆ ತಿಳಿಸಲು ಮರೆಯದಿರಿ.
ಕೆ.ಎನ್.ಶಾಂತಕುಮಾರ್
ಸಂಪಾದಕ.

ಇನ್ಮುಂದೆ ಅಂಧರೂ ಕನ್ನಡ ಓದಬಹುದು!


ಸಾಧನೆಗೆ ಅಂಧತ್ವ ಶಾಪವಲ್ಲ ಎಂದು ನಮ್ಮಲ್ಲಿ ಹಲವು ಮಂದಿ ಸಾಧಿಸಿ ತೋರಿಸಿದ್ದಾರೆ. ಹುಟ್ಟಿನಿಂದ ಅಂಧರಾದರೂ ಸಂಗೀತ ಲೋಕದಲ್ಲಿ ಅಪಾರ ಸಾಧನೆ ಮೆರೆದ ಪಂಡಿತ್ ಪುಟ್ಟರಾಜ ಗವಾಯಿ ಇರಬಹುದು. ಪ್ರಸಿದ್ಧ ಇಂಗ್ಲಿಷ್ ಸಾಹಿತಿ ಜಾನ್ ಮಿಲ್ಟನ್ ಇರಬಹುದು. ಇವರೆಲ್ಲ ಅಂಧತ್ವ ಮೆಟ್ಟಿನಿಂತು ಬದುಕಿನಲ್ಲಿ ಸಾಧನೆಗೈದಿದ್ದಾರೆ.

ಶಿವಮೊಗ್ಗದ ಶ್ರೀಧರ್ ಟಿ.ಎಸ್. ಎಂಬವರದ್ದು ಅಂಧರಿಗೆ ಅಕ್ಷರದ ಬೆಳಕು ನೀಡುವ ಸಾಧನೆ. ಕಂಪ್ಯೂಟರ್ ಪರದೆಯಲ್ಲಿರುವ ಅಕ್ಷರಗಳನ್ನು ಓದುವ "ಇ-ಸ್ಪೀಕ್" ಎಂಬ ತಂತ್ರಾಂಶವನ್ನು ಕನ್ನಡಕ್ಕೆ ತಂದಿದ್ದಾರೆ. ಇವರ ಸಾಧನೆಯಿಂದ ಅಂಧರೂ ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳನ್ನು ಓದಬಹುದು. ಇದಕ್ಕೆ ನೆರವಾದದ್ದು ಒಂದು ಬಗೆಯ ಸ್ಕ್ರೀನ್-ರೀಡರ್ ತಂತ್ರಾಂಶ. ಸುಮಾರು 6 ವರ್ಷಗಳ ಹಿಂದೆಯೇ ಈ ತಂತ್ರಾಂಶ ಬೆಳಕಿಗೆ ಬಂದಿತ್ತು. ಆದರೆ ಇದು ಕಣ್ಣಿದ್ದವರ ಗಮನಕ್ಕೆ ಬಂದಿರಲಿಲ್ಲ ಎಂದೆನಿಸುತ್ತದೆ. ಅಂಧರೊಬ್ಬರು ಇದನ್ನು ಹುಡುಕಿ ತೆಗೆದು ಅದನ್ನು ಅಭಿವೃದ್ಧಿಸಿ ಕನ್ನಡ ಬಲ್ಲ ಅಂಧರಿಗೆ ಕಣ್ಣಾಗಿದ್ದಾರೆ. ಈಗ ಈ ತಂತ್ರಾಂಶ ಇಂಟರ್ನೆಟ್ ನಲ್ಲಿ ಎಲ್ಲರಿಗೂ ಉಚಿತವಾಗಿ ದೊರಕುತ್ತದೆ.

ನೂತನ ತಂತ್ರಾಂಶದಿಂದಾಗಿ ಅಂಧರು ಕಂಪ್ಯೂಟರಿನಲ್ಲಿ ಸಾಮಾನ್ಯ ಕನ್ನಡಿಗರಂತೆ ಕನ್ನಡ ಓದಬಹುದು. "ಯುನಿಕೋಡ್-8" ಕನ್ನಡ ಅಕ್ಷರವಿರುವ ಅಂತರ್‌ಜಾಲದ ಎಲ್ಲಾ ಕನ್ನಡ ವೆಬ್‌ಸೈಟ್‌ಗಳನ್ನೂ ಸಂದರ್ಶಿಸಿ ತಮಗೆ ಬೇಕಾದ ಯಾವುದೇ ವಿಷಯವನ್ನಾದರೂ ಕಂಪ್ಯೂಟರ್‌ನ ಸಹಾಯದಿಂದ ತಿಳಿದುಕೊಳ್ಳಬಹುದು.

ಅಂಧರು ಹೇಗೆ ಕಂಪ್ಯೂಟರ್ ಬಳಸುತ್ತಾರೆ? ಹೇಗೆ ಕನ್ನಡ ಓದುತ್ತಾರೆ? ಎಂಬ ಸೋಜಿಗದ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಪರದೆಯಲ್ಲಿ ಮೂಡುವ ಅಕ್ಷರಗಳನ್ನು ನೋಡಲು ಅವರಿಗೆ ಕಣ್ಣಿಲ್ಲ. ಆದರೆ ಸ್ಕ್ರೀನ್ ರೀಡರ್ ಗಳೆಂಬ ವಿಶಿಷ್ಟ ಬಗೆಯ ಸಾಫ್ಟ್ ವೇರ್ ಈ ತೊಂದರೆಗೆ ಪರಿಹಾರ ನೀಡುತ್ತದೆ.

ಏನಿದು ಸ್ಕ್ರೀನ್ ರೀಡರ್? : ಸ್ಕ್ರೀನ್ ರೀಡರ್‌ಗಳು ಎಂದರೆ ಇವು ಒಂದು ರೀತಿಯ ವಿಶೇಷ ತಂತ್ರಾಂಶಗಳು. ಈ ತಂತ್ರಾಂಶಗಳು ಕಂಪ್ಯೂಟರ್‌ನ ಪರದೆಯ ಮೇಲೆ ಬರುವ ಎಲ್ಲ ಪಠ್ಯಗಳನ್ನೂ "ಟೆಕ್ಸ್ಟ್ ಟು ಸ್ಪೀಚ್" ಎಂಬ ಮತ್ತೊಂದು ವಿಶೇಷ ತಂತ್ರಾಂಶದ ಸಹಾಯದಿಂದ ಮಾತಿನ ರೂಪಕ್ಕೆ ಬದಲಾಯಿಸುತ್ತವೆ. ಇದನ್ನು ಕೇಳಿಸಿಕೊಂಡು ಅಂಧರು ಸಾಮಾನ್ಯರಂತೆ ಕಂಪ್ಯೂಟರ್‌ನಲ್ಲಿ ಕೆಲಸವನ್ನು ಮಾಡಬಹುದಾಗಿದೆ. ಇದರ ಸಹಾಯದಿಂದಾಗಿ ಈಗ ಅಂದರು "ಐಟಿ" ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇಂತಹ ತಂತ್ರಾಂಶಗಳು ಆಂಗ್ಲ ಭಾಷೆಯಲ್ಲಿ ಈ ಮೊದಲೇ ಇತ್ತು. ಆದರೆ ಭಾರತೀಯ ಭಾಷೆಗಳಲ್ಲಿ ಇರಲಿಲ್ಲ.

ತಂತ್ರಜ್ಞಾನದಲ್ಲಿ ಇತ್ತೀಚೆಗೆ ಆದ ಶೀಘ್ರ ಬೆಳವಣಿಗೆಗಳಿಂದಾಗಿ ಭಾರತೀಯ ಭಾಷೆಗಳನ್ನೂ ಓದಬಲ್ಲ "ಟೀ.ಟೀ.ಎಸ್.(ಟೆಕ್ಸ್ಟ್ ಟು ಸ್ಪೀಚ್)ಗಳು ತಯಾರಾಗುತ್ತಿವೆ. ಅದರಲ್ಲಿ ಕನ್ನಡ ಓದಬಲ್ಲ ತಂತ್ರಾಂಶಗಳೂ ತಯಾರಾಗುತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ, "ಈಸ್ಪೀಕ್" ಎಂಬ ಒಂದು ವಿಶೇಷ ತಂತ್ರಾಂಶವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಏಕೆಂದರೆ, ಈ ತಂತ್ರಾಂಶವು ತುಂಬಾ ಚಿಕ್ಕದಾಗಿದ್ದು ಪ್ರಪಂಚದ ಸುಮಾರು ನಲವತ್ತರಿಂದ ಐವತ್ತು ಭಾಷೆಗಳ ಪಠ್ಯವನ್ನು ಓದಬಲ್ಲದು. ಇದರಲ್ಲಿ, ನಾಲ್ಕೈದು ಭಾರತೀಯ ಭಾಷೆಗಳೂ ಸೇರಿವೆ; ಮತ್ತೂ ಎರಡರಿಂದ ಮೂರು ಭಾರತೀಯ ಭಾಷೆಗಳು ಸೇರುವುದರಲ್ಲಿವೆ. ಈಗ ಸೇರಿರುವ ಭಾರತೀಯ ಭಾಷೆಗಳೆಂದರೆ ಹಿಂದಿ, ಮರಾಠಿ, ತಮಿಳು. ಇದರಲ್ಲಿ ಕನ್ನಡ ಭಾಷೆಯೂ ಸೇರಿದ್ದು ಅದನ್ನು ಈಗ ಉತ್ತಮಪಡಿಸಲಾಗುತ್ತಿದೆ. ಇದು ಈಗ ಸುಮಾರು ಮುಗಿಯುವ ಹಂತದಲ್ಲಿ ಇದ್ದು, ಇದನ್ನು ಅನೇಕ ಅಂಧರು ತಮ್ಮ ಕಂಪ್ಯೂಟರುಗಳಲ್ಲಿ ಉಪಯೋಗಿಸುತ್ತಿದ್ದಾರೆ. ಇತ್ತೀಚೆಗೆ, ಇದರಲ್ಲಿ ತೆಲುಗು ಭಾಷೆಯನ್ನು ಸೇರಿಸಲಾಗುತ್ತಿದ್ದು, ಇದರ ಮೇಲೆ ಕೆಲಸ ನಡೆಯುತ್ತಿದೆ. ಗುಜರಾತಿ ಭಾಷೆಯನ್ನೂ ಸೇರಿಸುವ ಪ್ರಯತ್ನ ಈಗ ಆರಂಭವಾಗಿದೆ.

ಈಸ್ಪೀಕ್‌ನ ಚುಟುಕು ಇತಿಹಾಸ : ಈ ತಂತ್ರಾಂಶವನ್ನು ಇಂಗ್ಲೆಂಡ್ ದೇಶದ ಜೊನಾಥನ್ ಡಡ್ಡಿಂಗ್ಟನ್ ಎಂಬುವವರು ಸಿದ್ಧಪಡಿಸಿದ್ದಾರೆ. ಇದನ್ನು ಫೆಬ್ರವರಿ 2006ರಲ್ಲಿ ಬಿಡುಗಡೆಗೊಳಿಸಿದರು. ಈ ತಂತ್ರಾಂಶವು ಉಚಿತ ಹಾಗು ಓಪನ್ ಸೋರ್ಸ್ ತಂತ್ರಾಂಶವಾಗಿದೆ. ಇದನ್ನು "ವಿಂಡೋಸ್" ಮತ್ತು "ಲೈನಕ್ಸ್" ಹೊಂದಿರುವ ಕಂಪ್ಯೂಟರುಗಳಲ್ಲಿ ಬಳಸಬಹುದಾಗಿದೆ. ಸದ್ಯಕ್ಕೆ ಈ ತಂತ್ರಾಂಶವು ಪ್ರಪಂಚದ ಸುಮಾರು ನಲವತ್ತರಿಂದ ಐವತ್ತು ಭಾಷೆಗಳಲ್ಲಿ ಲಭ್ಯವಿದೆ. ಎಲ್ಲಾ ಭಾಷೆಗಳನ್ನೂ ಡಡ್ಡಿಂಗ್ಟನ್ ಅವರೇ ಸಿದ್ದಪಡಿಸುತ್ತಾರೆ. ಆದರೆ, ಅವರು ಈ ಕೆಲಸದಲ್ಲಿ ಆಯಾ ಭಾಷೆಗಳನ್ನು ಬಲ್ಲವರ ಸಹಾಯವನ್ನು ಪಡೆದುಕೊಳ್ಳುತ್ತಾರೆ.

ಶಿವಮೊಗ್ಗದ ಶ್ರೀಧರ್ ಸಾಧನೆ : ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶ್ರೀಧರ ಎಂಬ ಅಂಧ ಯುವಕನ ಸಂಪೂರ್ಣ ಸಹಕಾರದೊಂದಿಗೆ ಈಗ ಕನ್ನಡ ಭಾಷೆಯನ್ನೂ ಅಭಿವೃದ್ದಿಗೊಳಿಸಲಾಗಿದೆ. ಇನ್ನೂ ಉತ್ತಮಪಡಿಸುವ ಕೆಲಸ ಈಗಲು ನಡೆಯುತ್ತಿದೆ. ಇದರ ಪ್ರಯೋಜನವನ್ನು ಈಗಾಗಲೇ ಅನೇಕ ಅಂಧರು ಪಡೆದುಕೊಳ್ಳುತ್ತಿದ್ದಾರೆ. ಅವರು ಈಗ ಸುದ್ದಿಗಳನ್ನು ಹಾಗು ಇತರೆ ಸಾಮಾನ್ಯ ಜ್ಞಾನದ ವಿಚಾರವನ್ನು ಇದರ ಸಹಾಯದಿಂದಲೇ ನೇರವಾಗಿ ವೆಬ್‌ಸೈಟಿನಿಂದಲೇ ಇತರರ ಸಹಾಯವಿಲ್ಲದೇ ಓದುತ್ತಿದ್ದಾರೆ. ಇದಕ್ಕಾಗಿ http://espeak.sourceforge.net/test/latest.htmlಗೆ ಹೋಗಿ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಶ್ರೀಧರ್. ಟಿ.ಎಸ್. ಅವರನ್ನು ಸಂಪರ್ಕಿಸಬಹುದಾಗಿದೆ. ಇವರು ಸ್ವತಃ ಅಂಧರಾಗಿದ್ದು ಈಸ್ಪೀಕ್‌ನಲ್ಲಿ ಕನ್ನಡ ಭಾಷೆಯನ್ನು ಉತ್ತಮಗೊಳಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ದಿನ ನಿತ್ಯದ ಜೀವನದಲ್ಲಿ ಇದನ್ನು ಸುದ್ದಿ ಓದಲು, ತಮ್ಮ ಪದವಿ ಶಿಕ್ಷಣದ ಪಠ್ಯವನ್ನು ಓದಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನು ತಮ್ಮ ಸ್ನೇಹಿತರುಗಳೊಂದಿಗೂ ಹಂಚಿಕೊಂಡು ಅವರ ಅಭಿಪ್ರಾಯಗಳ ಮೇಲೆ ಇದನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ನೀವು ಅವರನ್ನೇ ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ: 99809 89171. 
                                    ಅವರ ಈ-ಮೇಲ್ ವಿಳಾಸ: tss.abs@gmail.com.

Thursday, January 20, 2011

Raaga Top Ten

ಮೊಬೈಲ್ ನಂಬರ್ ಪೊರ್ಟೆಬಿಲಿಟಿ ಬಂತು ಡುಂ... ಡುಂ.....

ಇನ್ನು ಮುಂದೆ ಮೊಬೈಲ್ ಸೇವೆಗಳ ಬಳಕೆ ಹಿಂದಿಗಿಂತಲೂ ಬಿಂದಾಸ್ ಆಗಲಿದೆ. ಬಹುನಿರೀಕ್ಷಿತ ಮೊಬೈಲ್ ನಂಬರ್ ಪೊರ್ಟೆಬಿಲಿಟಿ (ಎಂ ಎನ್ ಪಿ) ಕೊನೆಗೂ ನಮ್ಮಲ್ಲಿಗೆ ಬಂದಿದೆ. ಇನ್ನು ಮುಂದೆ ಕೇವಲ 19 ರೂಪಾಯಿ ಖರ್ಚು ಮಾಡಿದರೆ ಸಾಕು. ಯಾವ ಕಂಪನಿಯ ಸಿಮ್ ಖರೀದಿಸಿದರೂ ಹಳೆಯ ನಂಬರ್ ಉಳಿಸಿಕೊಳ್ಳಬಹುದು. ಇದು ನನ್ನ ಹೊಸ ನಂಬರ್ ಸೇವ್ ಮಾಡಿಟ್ಟುಕೊಳ್ಳಿ ಅಂತ ಯಾರಿಗೂ ಸಂದೇಶ ಕಳುಹಿಸುವ ತೊಂದರೆಯೂ ಇಲ್ಲ. ನಿಮಗೆ ಇಷ್ಟವಾದ ಮೊಬೈಲ್ ಸೇವಾ ಕಂಪನಿಗೆ ಹಾರಬಹುದು. ಟ್ರಾಯ್(TRAI) ನಿಯಮಾವಳಿಗೆ ತಕ್ಕಂತೆ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಿರುವ ಐಡಿಯಾ ಸೆಲ್ಯೂಲರ್ ಸಂಸ್ಥೆ MNP ಅಳವಡಿಸುವಲ್ಲಿ ಸಫಲವಾಗಿದೆ.

ಹೆಚ್ಚಿನ ಮೊಬೈಲ್ ಸೇವಾದಾರ ಕಂಪನಿಗಳು ಜನವರಿ 20ರಿಂದ ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಈ ಸೇವೆಯನ್ನು ಆರಂಭಿಸಲಿವೆ. ಐಡಿಯಾ ಸೆಲ್ಯುಲಾರ್ ಇದರಲ್ಲಿ ಮುಂಚೂಣಿಯಲ್ಲಿದ್ದು ನಾಡಿದ್ದು ಅಂದರೆ 20ನೇ ತಾರೀಖಿನಿಂದ ದೇಶಾದ್ಯಂತ ಈ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ ದೇಶದ ಸುಮಾರು 700 ಮಿಲಿಯನ್ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವಂತೆ ಸಹಾಯವಾಣಿ ಟೂಲ್ ಫ್ರೀ ನಂಬರ್ 1800-270-0000 ಗೆ ಕರೆ ಮಾಡಬಹುದಾಗಿದೆ. ಐಡಿಯಾ, ವೊಡಾಫೋನ್ ನಂತಹ ಕಂಪನಿಗಳು ಈಗಾಗಲೇ ಎಂಎನ್ ಪಿ ಜಾಹೀರಾತು ಅಭಿಯಾನ ಆರಂಭಿಸಿವೆ.

ಏನಿದು ನಂಬರ್ ಪೊರ್ಟೆಬಿಲಿಟಿ?: ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಮೊಬೈಲ್ ನಂಬರ್ ಉಳಿಸಿಕೊಂಡು ಹೊಸ ಮೊಬೈಲ್ ಕಂಪನಿಯ ಸೇವೆಯನ್ನು ಪಡೆಯುವುದು. ಅಂದರೆ ಈಗಿನ ಕಂಪನಿ ನೀಡುತ್ತಿರುವ ಸೇವೆ ನಿಮಗೆ ಇಷ್ಟವಾಗದೇ ಇದ್ದರೆ ಅದೇ ನಂಬರ್ ನ ಬೇರೊಂದು ಕಂಪನಿಯ ಸಿಮ್ ಖರೀದಿಸಬಹುದು.

ಈಗ ಮೊಬೈಲ್ ಸೇವಾದಾರ ಕಂಪನಿಗಳು ನೀಡುವ ಆಫರ್ ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಬೇರೊಂದು ಕಂಪನಿಯ ಆಫರ್ ನೋಡಿ ಛೇ ಆ ಸಿಮ್ ನನ್ನಲ್ಲಿರುತ್ತಿದ್ದರೆ? ಎಂಬ ಬಯಕೆ ನಿಮಗಿರಬಹುದು. ಅಥವಾ ಇಂತಹ ಆಫರ್ ಗಳಿಂದಾಗಿ ನೀವು ಹಲವು ಸಿಮ್ ಗಳ ಒಡೆಯರಾಗಿರಬಹುದು. ಇನ್ನು ಮುಂದೆ ಹಳೆಯ ನಂಬರ್ ಉಳಿಸಿಕೊಂಡೇ ನಿಮಗಿಷ್ಟವಾದ ಯಾವುದೇ ಕಂಪನಿಯ ಸಿಮ್ ಖರೀದಿಸಬಹುದು.

ಕೇವಲ 19 ರೂಪಾಯಿ ವೆಚ್ಚ: ಸಿಮ್ ಬದಲಾಯಿಸಿದರೂ ಹಳೆಯ ನಂಬರ್ ಉಳಿಸಿಕೊಳ್ಳಲು ಕೇವಲ 19 ರೂಪಾಯಿ ಖರ್ಚು ಮಾಡಿದರೆ ಸಾಕು. ಈ ಸೇವೆಯನ್ನು ಪಡೆಯಬಯಸುವವರು PORT ಅಂತ ಮೊಬೈಲ್ ನಲ್ಲಿ ಕೀ ಮಾಡಿ ಅದರ ಮುಂದೆ ಮೊಬೈಲ್ ಸಂಖ್ಯೆ ಹಾಕಿ 1900 ನಂಬರ್ ಗೆ ಸಂದೇಶ ಕಳಿಸಿದರೆ ಸಾಕು. ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ಕೊಡ್(ಯುಪಿಸಿ) ನಿಮ್ಮ ಮೊಬೈಲ್ ಗೆ ಬರುತ್ತದೆ. ಈ ಎಸ್ಎಂಎಸ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಕಳುಹಿಸಬೇಕಾಗುತ್ತದೆ. ಅಥವಾ ನೀವು ಹಿಂದಿನ ಕಂಪನಿ ನೀಡುವ ಫಾರ್ಮ್ ತುಂಬಿಸಿ ಯುಪಿಸಿ ಕೋಡ್ ಪಡೆಯಬಹುದು. ಆದರೆ ಈ ಪ್ರಕ್ರಿಯೆಗೆ ಸುಮಾರು ಒಂದು ವಾರ ಬೇಕಾಗುತ್ತದೆ. ಅದಕ್ಕಿಂತ ಎಸ್ಎಂಎಸ್ ಕಳುಹಿಸುವುದು ಉತ್ತಮ.

ಪೊರ್ಟೆಬಿಲಿಟಿ ಆರಂಭವಾದ ನಂತರ ಹೀಗೆ ಮಾಡಿ
* PORT ಅಂತ ಟೈಪ್ ಮಾಡಿ ಅದರ ಮುಂದೆ ನಿಮ್ಮ ಮೊಬೈಲ್ ಸಂಖೈ ಬರೆದು 1900ಕ್ಕೆ ಕಳಿಸಿ. ನಿಮಗೆ ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ನಂಬರ್ ಎಸ್ ಎಂ ಎಸ್ ಮೂಲಕ ದೊರಕುತ್ತದೆ.
* ಅಲ್ಲಿ ದೊರಕಿದ ಯೂನಿಕ್ಯೂ ಪೊರ್ಟಿಂಗ್ ನಂಬರ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಎಸ್ ಎಂ ಎಸ್ ಮಾಡಿ.
* ಹಳೆಯ ಕಂಪನಿ ನಿಮ್ಮ ದಾಖಲೆ ಪರಿಶೀಲಿಸಿ ಯಾವುದೇ ಬಾಕಿ ಇಲ್ಲವೆಂದು ಪರಿಶೀಲಿಸುತ್ತದೆ. ಎಲ್ಲ ಚುಕ್ತಾ ಮಾಡಿದ ಮೇಲೆ ಬೇರೆ ಸೇವಾದಾರಲ್ಲಿಗೆ ಹೋಗಲು ಅವಕಾಶ ನೀಡುತ್ತದೆ.
* ಹೊಸ ಮೊಬೈಲ್ ಸೇವಾದಾರ ಕಂಪನಿ ನಿಮಗೆ ಎಸ್ಎಂಎಸ್ ಕಳುಹಿಸಿ ಕೊಡುತ್ತದೆ. ನಂತರದ ನಾಲ್ಕು ದಿನಗಳೊಳಗೆ ಈ ಸೇವೆ ನಿಮಗೆ ದೊರಕಬಹುದು.
* ನಿಮ್ಮ ಹಳೆಯ ಸಿಮ್ ಡೆಡ್ ಆದ ಎರಡು ಗಂಟೆಯ ನಂತರ ಸುಮಾರು 19 ರೂಪಾಯಿ ಮತ್ತು ಸೂಕ್ತ ದಾಖಲೆ ನೀಡಿ ಹೊಸ ಕಂಪನಿಯಿಂದ ಸೇವೆ ಪಡೆದುಕೊಳ್ಳಬಹುದು.
(ಮುಂದಿನ ದಿನಗಳಲ್ಲಿ ಈ ಸೇವೆ ಪಡೆಯುವುದು ಇನ್ನಷ್ಟು ಸುಲಭವಾಗಬಹುದು)

Friday, January 14, 2011

ವಿಕಿಪೀಡಿಯ 10 ನೇ ಹುಟ್ಟುಹಬ್ಬ

ಮುಕ್ತ ವಿಶ್ವಕೋಶ ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸವ ಸಂಭ್ರಮ.
ಭಾರತದಲ್ಲಿ ವಿಕಿಪೀಡಿಯದ ಕ್ರಿಯಾಶೀಲ ಕೇಂದ್ರ ಎನಿಸಿರುವ ಬೆಂಗಳೂರು ವಿಕಿ ತಂಡ, ಜ.15ರಂದು ಸಂಪೂರ್ಣವಾಗಿ ವಿಕಿ 10ರ ಸಂಭ್ರಮಕ್ಕೆ ಮೀಸಲಿರಿಸಿದೆ. ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದೆ.

ವಿಕಿ ಫೌಂಡೇಷನ್ ನ ಅಧಿಕಾರಿಗಳು, ಅತಿಥಿ ವಾಚಕರು ಸೇರಿದಂತೆ ಹಲವರಿಂದ ಉಪಯುಕ್ತ ಮಾಹಿತಿ ಸಿಗಲಿದೆ. ವಿಕಿಮೀಡಿಯಾದ ಮುಂದಿನ ಯೋಜನೆಗಳು, ಜ್ಞಾನ ಸೃಷ್ಟಿ ಹಾಗೂ ಹಂಚಿಕೆಯಲ್ಲಿನ ತೊಡಕುಗಳು, ಲಾಭಗಳು ಮುಂತಾದವುಗಳ ವಿವರ ಕೂಡಾ ಸಿಗುತ್ತದೆ.

ಸ್ಥಳ: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್
ಬೆಂಗಳೂರು 560012.

ಬೆಳಗ್ಗೆ 9 ರಿಂದ 4.30ರ ವರೆಗಿನ ಸಮಯವನ್ನು ವಿಕಿಪೀಡಿಯನ್ ಗಳಿಗೆ ಮೀಸಲಿಡಲಾಗಿದ್ದು, 5 ಗಂಟೆ ನಂತರ ಸಾರ್ವಜನಿಕರಿಗೆ ಕಾರ್ಯಕ್ರಮವಿರುತ್ತದೆ.

2010ರ ವಿಕಿಪೀಡಿಯ ವಿಶ್ವಕೋಶದಲ್ಲಿ ವಿವಿಧ ಭಾಷೆಗಳ ಮಾಹಿತಿ ಕಣಜದಲ್ಲಿರುವ ಲೇಖನಗಳ ಸಂಖ್ಯೆಗಳು ಇಂತಿವೆ:
* ಗುಜರಾತ್ : 15,000 ಲೇಖನಗಳು
* ಮರಾಠಿ : 30,000 ಲೇಖನಗಳು
* ಉರ್ದು : 15,000 ಲೇಖನಗಳು
* ಮಲೆಯಾಳಂ : 15,000 ಲೇಖನಗಳು
* ಮಲೆಯಾಳಂ ವಿಕ್ಷನರಿ: 60,000 ಪದಗಳು
* ತಮಿಳು : 25,000 ಲೇಖನಗಳು
* ತಮಿಳು ವಿಕ್ಷನರಿ : 1,90,000+ ಪದಗಳು

ಈ ಪಟ್ಟಿಯಲ್ಲಿ ಕನ್ನಡ ಏಕೆ ಸೇರಿಲ್ಲ? ಕಾರಣ ಇಷ್ಟೇ ವಿಕಿಪೀಡಿಯದಲ್ಲಿ ಕನ್ನಡ ಲೇಖನಗಳ ಸಂಖ್ಯೆ ಇನ್ನೂ 10,000 ಕೂಡಾ ದಾಟಿಲ್ಲ. ಐಟಿ ಉದ್ಯಮದಲ್ಲಿರುವ ಕನ್ನಡಿಗರಿಗೆ ಇನ್ನೂ ವಿಕಿಪೀಡಿಯ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇನ್ನು ಉತ್ಸಾಹಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಸಿಗುವುದೇ ಕಷ್ಟ. ವಿಕಿಪೀಡಿಯ ಸಾರ್ವಜನಿಕರಿಗಾಗಿ ಇರುವ ಮುಕ್ತ ವಿಶ್ವಕೋಶವಾಗಿದ್ದು, ಹೆಚ್ಚೆಚ್ಚು ಲೇಖನಗಳನ್ನು ತುಂಬಿಸುವ ಮೂಲಕ ಕನ್ನಡ ಸೇವೆ ಮಾಡುವ ಅವಕಾಶವುಂಟು. ವಿಕಿಪೀಡಿಯಾಗೆ ಲೇಖನ ಸೇರಿಸುವುದು ಹೇಗೆ ಹಾಗೂ ಏಕೆ? ಎಂಬ ಪ್ರಶ್ನೆಗಳಿದ್ದರೆ ಜ.15ರ ವಿಕಿಪೀಡಿಯ 10 ರ ಸಂಭ್ರಮದಲ್ಲಿ ಪಾಲ್ಗೊಂಡು ಚರ್ಚಿಸಿ.

ವಿಕಿಪೀಡಿಯ ಬಗ್ಗೆ :ವಿಕಿಮೀಡಿಯಾ ಫೌಂಡೇಶನ್‌ನ ಸಹಾಯದಿಂದ ನಡೆಯುತ್ತಿರುವ ವಿಕಿಪೀಡಿಯ ಒಂದು ಮುಕ್ತ ಸಹಯೋಗಿ ಬಹುಭಾಷಾ ವಿಶ್ವಕೋಶ. ಸುಮಾರು 17 ಮಿಲಿಯ ಲೇಖನಗಳು ಇದರಲ್ಲಿವೆ. ಇಂಗ್ಲಿಶ್ ಭಾಷೆ ಒಂದರಲ್ಲೇ ಸುಮಾರು 3.5 ಮಿಲಿಯ ಲೇಖನಗಳಿವೆ.

ಈ ಎಲ್ಲ ಲೇಖನಗಳನ್ನು ಪ್ರಪಂಚಾದ್ಯಂತ ಚೆದುರಿಹೋಗಿರುವ ಸ್ವಯಂಸೇವಕರು ಬರೆದಿರುವುದು ಮಾತ್ರವಲ್ಲ ಈ ಲೇಖನಗಳನ್ನು ಯಾರು ಬೇಕಾದರು ತಿದ್ದಬಹುದು ಮತ್ತು ನವೀಕರಿಸಬಹುದು. ವಿಕಿಪೀಡಿಯವನ್ನು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಾಂಗರ್ ಅವರುಗಳು 2001 ರಲ್ಲಿ ಪ್ರಾರಂಭಿಸಿದರು. ಈಗ ಇದು ಅಂತರಜಾಲದ ಎಲ್ಲ ತಾಣಗಳಲ್ಲಿ ಜನಬಳಕೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ. ಅಂತರಜಾಲದಲ್ಲಿರುವ ಮಾಹಿತಿ ಆಕರವಾಗಿ ಇದು ಪ್ರಥಮ ಸ್ಥಾನದಲ್ಲಿದೆ.

Thursday, January 13, 2011

ನೀರಿನಿಂದ ಓಡುವ ಕಾರು: ಯುವ ವಿಜ್ಞಾನಿಯಿಂದ ಸಾಧನೆ

 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಈ ದಿನಗಳಲ್ಲಿ, ನೀರು ಬಳಸಿ ಕಾರು, ಬೈಕು ಓಡಿಸುವಂತಾದರೆ ಹೇಗಿರುತ್ತೆ? ಒಮ್ಮೆ ಊಹಿಸಿನೋಡಿ. ವಿಶ್ವವೇ ಪೆಟ್ರೋಲ್‌ಗೆ ಬದಲಿ ಇಂಧನವನ್ನು ಕಂಡುಹಿಡಿಯಲು ಹೆಣಗಾಡುತ್ತಿರುವಾಗ ಇತ್ತ ನಮ್ಮ ಯುವ ವಿಜ್ಞಾನಿ ಆ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.
ನೀರಿನಲ್ಲಿರುವ ಜಲಜನಕದ ಅಂಶವನ್ನು ವಾಹನಗಳ ಇಂಧನವನ್ನಾಗಿ ಪರಿವರ್ತಿಸಿ, ಅದರಿಂದ 350 ಸಿಸಿ ಮೊಟಾರು ಬೈಕನ್ನು ಸುಮಾರು ಒಂದು ಗಂಟೆ ಕಾಲ ಚಲಾಯಿಸಬಲ್ಲ ಸಂಶೋಧನೆ ನಡೆಸಿರುವ ಯುವ ವಿಜ್ಞಾನಿ ಗೋವಿಂದ ಮಾಳವೀಯ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಟಾಟಾ ಕಾರುಗಳ ಒಡೆಯ, ಉದ್ಯಮಿ ರತನ್ ಟಾಟಾ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಸುಮಾರು ಒಂದೂವರೆ ದಶಕದ ಕಠಿಣ ಪರಿಶ್ರಮದಿಂದ ತಾನು ಈ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ತಮ್ಮ ಸಂಸ್ಥೆಯಿಂದ ಜಲ-ಆಧಾರಿತ ಕಾರುಗಳ ತಯಾರಿಕೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ತನ್ನನ್ನೂ ಸೇರಿಸಿಕೊಳ್ಳುವಂತೆ ಮಾಳವೀಯ ಕೇಳಿಕೊಂಡಿದ್ದಾರೆ.
ಸೂಕ್ತ ಮೂಲಸೌಕರ್ಯ ಮತ್ತು ಅವಕಾಶ ಒದಗಿಸಿಕೊಟ್ಟರೆ, ನೀರಿನಿಂದ ಓಡುವ ಕಾರಿನ ಎಂಜಿನ್ ತಯಾರಿಸಬಲ್ಲೆ ಎಂದು 12 ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿರುವ ಮಾಳವೀಯ ದೃಢವಾಗಿ ಹೇಳಿದ್ದಾರೆ.
ಒಂದು ಕೆಜಿ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ಮತ್ತು ಎರಡು ಕೆಜಿ ಅಲ್ಯುಮಿನಿಯಂ ಚೂರನ್ನು ನೀರಿನೊಂದಿಗೆ ಬೆರೆಸಿ, ಆ ಮೂಲಕ ಉತ್ಪತ್ತಿಯಾದ ಜಲಜನಕವನ್ನು ಉಪಯೋಗಿಸಿಕೊಂಡು ಪ್ರಸ್ತುತ ಬೈಕ್ ಓಡಿಸುತ್ತಿರುವುದಾಗಿ ತನ್ನ ಪತ್ರದಲ್ಲಿ ತಿಳಿಸಿರುವ ಅವರು, ಜಲಜನಕದಲ್ಲಿರುವ ದಹನಶೀಲತೆಯಿಂದಾಗಿ ಸ್ಫೋಟವಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ನೀರು ಚಾಲಿತ ಕಾರಿನ ಸಂಶೋಧನೆಗೆ ಅಧಿಕ ಹಣ ವಿನಿಯೋಗಿಸುವುದಾಗಿ ಇತ್ತೀಚೆಗೆ ಟಾಟಾ ಪ್ರಕಟಿಸಿತ್ತು.

Friday, January 7, 2011

ಈಗೇನಿದ್ದರೂ ಬ್ಲಾಗ್, ಟ್ವಿಟರ್, ಫೇಸ್ ಬುಕ್, ಆರ್ಕುಟ್ ಕಾಲ

 

ಹೊಸ ವರ್ಷದ ಹೊತ್ತಿಗೆ ಹೊಸದೊಂದು ಡೈರಿ ತಂದು ಬರೆಯಲು ಶುರುಮಾಡುವ ಮೂಡ್ ಬಹುತೇಕರಿಗೆ ಇಲ್ಲ. ಇದಕ್ಕೆ ಬದಲಾಗಿ ಎಲ್ಲರಿಗೂ ಈಗ ಸಿಕ್ಕಿದೆ ಇ-ಡೈರಿ.
ಟ್ವಿಟರ್… ಫೇಸ್ ಬುಕ್… ಆರ್ಕುಟ್…
ಇದು ಆಧುನಿಕ ಸಂಪರ್ಕ ಸಾಧನಗಳು . ವ್ಯಕ್ತಿ ವ್ಯಕ್ತಿಗೆ ಕೊಂಡಿ ಕಲ್ಪಿಸುವ ಹಾಗೆಯೇ ವೈಯಕ್ತಿಕ ಒಳತೋಟಿಗಳನ್ನು ಹೊರಹಾಕುವ ಮಾಧ್ಯಮಗಳೂ ಆಗುತ್ತಿವೆ. ಒಂದರ್ಥದಲ್ಲಿ ಬ್ಲಾಗ್, ಫೇಸ್ ಬುಕ್ ಮೊದಲಾದ ಈ ಎಲ್ಲಾ ಮಾಧ್ಯಮಗಳು ‘ಆನ್ ಲೈನ್ ಡೈರಿ’ಯಂತೆ ಬಳಕೆಯಾಗುತ್ತಿವೆ.
ಹಿಂದೆಲ್ಲ ಹೊಸವರ್ಷ ಬಂದಾಕ್ಷಣ ಹೊಸ ಡೈರಿ ಕೊಂಡು ತಂದು ಅದರಲ್ಲಿ ಒಪ್ಪವಾಗಿ ಡೈರಿ ಬರೆಯುವುದಕ್ಕೆ ಶುರು ಮಾಡುತ್ತಿದ್ದವರು ಬಹಳ ಮಂದಿ. ಆದರ ಇಂದು ಹೀಗಿಲ್ಲ. ಮನೆಗೆ ಬಂದ ಮೇಲೆ ರಾತ್ರಿಯ ಹೊತ್ತು ಡೈರಿ ಹೊರತೆಗೆದು ಅದರಲ್ಲಿ ಚೆಂದದ ಅಕ್ಷರಗಳಿಂದ ಇಡೀ ದಿನದ ಅನುಭವಗಳನ್ನೆಲ್ಲ ಬರೆಯುವ ಪುರುಸೊತ್ತಾಗಲೀ, ವ್ಯವಧಾನವಾಗಲೀ ಯಾರಿಗೂ ಇಲ್ಲ. ಇಂಟರ್ನೆಟ್ ತೆರೆದು ಬ್ಲಾಗ್ ನಲ್ಲೋ, ಫೇಸ್ ಬುಕ್ ನಲ್ಲೋ ಟೈಪಿಸಿದರಾಯಿತು. ಅಳಿಸಿ ಹೋಗುತ್ತದೆಂಬ ಭಯವಿಲ್ಲ. ಪುಸ್ತಕ ಕಳೆದು ಹೋಗುವ ಹಿಂಜರಿಕೆಯೂ ಇಲ್ಲ.
ಬ್ಲಾಗ್ ಡೈರಿ
ದಿನಚರಿ ಪುಸ್ತಕವೇ ಆನ್ ಲೈನ್ ರೂಪದಲ್ಲಿ ಬಂದಂತಿರುವುದು ಬ್ಲಾಗ್ ಗಳಲ್ಲಿ. ಡೈರಿಗಳಲ್ಲಿ ಬರೆಯುವಂತೆ ಇಲ್ಲಿಯೂ ಸುದೀರ್ಘ ಬರಹಗಳನ್ನು ಬರೆಯುವವರೆಷ್ಟೋ ಜನ. ನಿತ್ಯದ ಬದುಕಿನಲ್ಲಿ ತಾವು ಕಂಡ ವಿಶಿಷ್ಟ ಘಟನೆ, ವಸ್ತು, ವಿಚಾರಗಳು, ಹೊಸ ಹೊಳಹುಗಳು, ಮನಸ್ಸಿನ ಒಳತೋಟಿ ಎಲ್ಲವೂ ಇಲ್ಲಿ ಬರಹ ರೂಪದಲ್ಲಿ ಮೂಡಿ ಬರುತ್ತದೆ. ಇತರರು ಓದುತ್ತಾರೆ ಎಂದು ಎಚ್ಚರದಿಂದ ಬರೆದವರು ಕೆಲವರಾದರೆ ತಮ್ಮ ಮನದಲ್ಲಿ ಮೂಡಿದ್ದೆಲ್ಲವನ್ನೂ ದಾಖಲಿಸುತ್ತಾ ಹೋಗುವವರು ಇನ್ನು ಕೆಲವರು. ಇದೀಗ ಜರ್ಮನಿಯಲ್ಲಿರುವ ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಈ ರೀತಿ ಬ್ಲಾಗಿಸುವವರಲ್ಲಿ ಒಬ್ಬರು. ಜರ್ಮನಿಗೆ ತೆರಳಿದ ಮೇಲಿಂದ ನಿಯಮಿತವಾಗಿ ಇಲ್ಲಿ ಬರೆಯುತ್ತಲೇ ಹೋಗಿದ್ದಾರೆ ಅವರು. ತಮ್ಮ ತಾಯಿಯವರು ತೀರಿಕೊಂಡ ಸಂದರ್ಭ ಮತ್ತು ಮಂಗಳೂರಿನ ವಿಮಾನ ದುರಂತದ ವೇಳೆ ತಮ್ಮ ಮನಸಿಗಾದ ನೋವನ್ನು ಬ್ಲಾಗ್ ನಲ್ಲಿ ದಾಖಲಿಸಿಕೊಂಡದ್ದು ಹೀಗೆ: ‘ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ. ಮನಸ್ಸು ಎಲ್ಲ ಆಸಕ್ತಿಗಳನ್ನೂ ನಿರಾಕರಿಸಿದೆ. ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ. ಆದರೆ ಅವು ಯಾವುದನ್ನೂ ಇಂದ್ರಿಯಗಳು ಸುಖಿಸುತ್ತಿಲ್ಲ. ಕಾತರ, ತಲ್ಲಣ, ಕುತೂಹಲ, ಬೆರಗು, ತೃಪ್ತಿ, ಸಿಟ್ಟು, ಯಾವುದೂ ಅಲ್ಲಿ ಇಲ್ಲ. ಚೇತನ ಜಡವಾಗಿದೆ. ಮನಸ್ಸು ವಿಷಣ್ಣವಾಗಿದೆ…’
ಇದೇ ರೀತಿ ತಮ್ಮ ಬ್ಲಾಗ್ ಗಳಲ್ಲಿ ತಮ್ಮ ಅಂತರಂಗದ ಮಾತುಗಳನ್ನು ದಾಖಲಿಸುತ್ತಿರುವವರು ಅದೆಷ್ಟೋ ಜನ.
ಕೆಲವರು ತಮ್ಮ ಪ್ರವಾಸದ ಸಂದರ್ಭದ ಅನುಭವಗಳನ್ನು ‘ಅಲೆಮಾರಿಯ ಅನುಭವಗಳು’ ಬ್ಲಾಗ್ ನಲ್ಲಿ ದಾಖಲಿಸಿದರೆ, ಪತ್ರಕರ್ತ ಶ್ರೀನಿವಾಸ ಗೌಡ ತಮ್ಮ ಬ್ಲಾಗ್ಗೆ ಇಟ್ಟಿರುವ ಹೆಸರೇ ‘ಖಾಸಗಿ ಡೈರಿ’ ಬದುಕಿನಂಗಳದಲ್ಲಿ ಕಂಡ ವಿಶಿಷ್ಟ ವ್ಯಕ್ತಿ , ಅನೂಹ್ಯ ಸಂಗತಿಗಳನ್ನು ಶಶಿಧರ ಭಟ್ರ ‘ಕುಮ್ರಿ’ ಬ್ಲಾಗ್ ದಾಖಲಿಸುತ್ತಾ ಹೋಗಿದ್ದರೆ ಬ್ಲಾಗಿಗರ ಬಾಳ ಹಾದಿಗೊಂದು ಕನ್ನಡಿಯಂತೆ ಮೂಡಿರುವುದು ‘ಓ ನನ್ನ ಚೇತನಾ’ ಬ್ಲಾಗ್. ನೋಡಿದ ಚಿತ್ರದ ಬಗೆಗಿನ ಅಭಿಪ್ರಾಯದಿಂದ ಹಿಡಿದು ಅಮೆರಿಕದ ಊರು, ಅನುಭವಗಳನ್ನು ಬರಹ, ಫೋಟೊಗಳಲ್ಲಿ ಸೆರೆಹಿಡಿಯುವ ಕ್ಯಾಲಿಫೋರ್ನಿಯಾದ ಹೇಮಶ್ರೀ ಅವರ ‘ಸ್ಮೈಲಿಂಗ್ ಕಲರ್ಸ್, ಎಲ್ಲೋ ಅಪರೂಪಕ್ಕೊಮ್ಮೆ ಬರಗಳನ್ನು ದಾಖಲಿಸುವ ರಾಧಿಕಾರ ‘ಮಧುಬನದಿ ರಾಧಿಕೆ’ ಒಂದೆಡೆ ಲಹರಿಯಂತೆ ಇನ್ನೊಂದೆಡೆ ಮನದ ಮಾತಿನಂತೆ ಬರೆಯುತ್ತ ಹೋಗುವ ‘ಕೆನೆ ಕಾಫಿ’, ಕನ್ನಡ- ಇಂಗ್ಲಿಷ್ ಭಾಷೆಗಳೆರಡರಲ್ಲೂ ಬ್ಲಾಗಿಗನ ಒಳಗನ್ನು ತೆರೆದಿಡುವ ‘ಅಂತರಂಗದ ಅಲೆಗಳು’ ಹೀಗೆ ಹುಡುಕುತ್ತ ಹೋದಷ್ಟೂ ವೈವಿಧ್ಯಮಯ ಬ್ಲಾಗ್ಗಳ ಸಾಲೇ ತೆರೆದುಕೊಳ್ಳುತ್ತದೆ.
ಗಂಭೀರ ಲೇಖನಗಳನ್ನು ಬರೆಯುವುದಕ್ಕೆ ಒಂದು ಬ್ಲಾಗ್, ಖಾಸಗಿ ವಿಚಾರಗಳನ್ನು ಬರೆಯುವುದಕ್ಕೆ ಇನ್ನೊಂದು-ಹೀಗೆ ಬಗೆಬಗೆಯ ಬ್ಲಾಗ್ಗಳನ್ನು ಮಾಡಿಕೊಂಡವರೂ ಅನೇಕರಿದ್ದಾರೆ.
ಶಾರ್ಟ್ ಅಂಡ್ ಸ್ವೀಟ್
ಬ್ಲಾಗ್ ಗಳಲ್ಲಿ ಕಾಣಿಸುವುದು ದೀರ್ಘ ಬರವಣಿಗೆಗಳಾದರೆ ಫೆಸ್ಬುಕ್, ಟ್ವಿಟರ್, ಆರ್ಕುಟ್ಗಳಲ್ಲಿ ಶಾರ್ಟ್ ಅಂಡ್ ಸ್ವೀಟ್ ಡೈರಿ ಬರಗಳು. ತಕ್ಷಣಕ್ಕೆ ಹೊಳೆದ ವಿಷಯವನ್ನು ಹೊಸ ವಿಚಾರಗಳನ್ನು ಇಲ್ಲಿ ಬರೆದು ಚರ್ಚೆಗೆ ಇತರರನ್ನು ಆಹ್ವಾನಿಸುವವರೂ ಉಮಟು. ಬೇರಾವುದೋ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿಕೊಂಡು ತನ್ನ ಭಾವನೆಗಳನ್ನ ದಾಖಲಿಸುತ್ತ ಹೋಗುವವರೂ ಇಲ್ಲಿದ್ದಾರೆ. ಏನೇ ಇದ್ದರೂ ಇಲ್ಲಿ ದೀರ್ಘ ಬರಹಗಳಿಲ್ಲ. ಆ ಕ್ಷಣಕ್ಕೆ ಹೊಳೆದ ಮಾತುಗಳನ್ನು ಕೆಲವೇ ಶಬ್ದಗಳಿಂದ ಹಿಡಿದು ಒಂದೆರಡು ವಾಕ್ಯಗಳಲ್ಲಿ ತಕ್ಷಣ ದಾಖಲಿಸುವುದಕ್ಕೆ ಇವು ಪೂರಕ. ಫೇಸ್ ಬುಕ್ ಅಂತೂ ಈ ನಿಟ್ಟಿನಲ್ಲಿ ತುಂಬಾ ಜನಪ್ರಿಯ.
ದೃಶ್ಯರೂಪ
ಈ ಆನ್ ಲೈನ್ ಮಾಧ್ಯಮಗಳೆಲ್ಲಾ ದಿನಚರಿಯ ದೃಶ್ಯರೂಪಗಳಾಗಿರುವುದು ಇನ್ನೊಂದು ವಿಶೇಷ. ಬ್ಲಾಗ್, ಫೇಸ್ಬುಕ್, ಅರ್ಕುಟ್ ಗಳೆಲ್ಲಲ್ಲ ತಮ್ಮ ಕುಟುಂಬಸ್ಥರ ಫೋಟೊಗಳು, ಪ್ರವಾಸದ ಸಂದರ್ಭದ ಚಿತ್ರಗಳು, ಇವೆಲ್ಲವನ್ನೂ ಅಪ್ಲೋಡ್ ಮಾಡುವವರು ಅದೆಷ್ಟೋ ಮಂದಿ. ತಮ್ಮ ಊರನ್ನು ಬಿಟ್ಟು ಪರ ಊರು, ವಿದೇಶಗಳೆಂದು ಹೊರ ಹೋದವರಿಗಂತೂ ಅಲ್ಲಿನ ತಮ್ಮ ಅನುಭವಗಳನ್ನು ತಾವು ಕಂಡ ದೃಶ್ಯಗಳನ್ನು ಶಾಶ್ವತವಾಗಿ ದಾಖಲಿಸುವುದಕ್ಕೆ ಇದಕ್ಕೀಂತ ಅತ್ಯುತ್ತಮ ಮಾಧ್ಯಮ ಬೇರಿಲ್ಲ. ಹಲವರು ತಮ್ಮ ಕಂದಮ್ಮಗಳ ಏಳು-ಬೀಳು , ಹೆಜ್ಜೆ ಇಡುವಿಕೆ ಹೀಗೆ ಮಗುವಿನ ಪ್ರತಿ ಹಂತದ ಬೆಳವಣಿಗೆಯನ್ನೂ ಫೋಟೊಗಳ ಮೂಲಕ ಇಲ್ಲಿ ಶಾಶ್ವತಗೊಳಿಸುವುದುಂಟು. ಫೋಟಗಳಮೂಲಕ ನೆನಪುಗಳನ್ನು ದಾಖಲಿಸುವುದಕ್ಕೆಂದೇ ರೂಪಿತವಾದ ಹಲವು ಬ್ಲಾಗ್ ಗಳೂ ಇವೆ .